ಸಿದ್ದಾಪುರದ ಕಾನಸೂರ್ ನಲ್ಲಿ ಟಿ.ಎಂ.ಎಸ್ ನ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭ

ಸಿದ್ದಾಪುರ : ರೈತರಿಗೆ ಆರ್ಥಿಕವಾಗಿ ಮೇಲೆ ಬರಲು ಸಹಕಾರಿ ಸಂಘಗಳು ಸಹಕಾರ ನೀಡುತ್ತಿವೆ, ಮನುಷ್ಯನಿಗೆ ರಕ್ತ ಸಂಚಾರ ಎಷ್ಟು ಮುಖ್ಯವು ಹಾಗೆ ಅರ್ಥ ವ್ಯವಸ್ಥೆಯಲ್ಲಿ ದುಡ್ಡಿನ ಸಂಚಾರವು ಅಷ್ಟೇ ಮುಖ್ಯವಾಗಿದೆ ರೈತರಿಗೆ ಹಣ ನೀಡಿದಾಗ ಅವರು ಹಣ ಕೂಡಿಡದೆ ವ್ಯವಹರಿಸುತ್ತಾರೆ ಇದರಿಂದ ಮಾರುಕಟ್ಟೆ ವ್ಯವಸ್ಥೆ ಉತ್ತಮ ವಾಗಿರುತ್ತದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು ಅವರು ತಾಲೂಕಿನ ಕಾನಸೂರ್ ನಲ್ಲಿ ಟಿ ಎಂ ಎಸ್ ನ ನೂತನ ಕಟ್ಟಡಗಳ ಉದ್ಘಾಟಿಸಿ ಸಭಾ ಕಾರ್ಯಕ್ರಮ ಮಾತನಾಡಿದರು. ಮುಖ್ಯ ಅತಿಥಿ ಗಳಾದ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಮಾತನಾಡಿ ಎಲ್ಲಿ ಸಹಕಾರಿ ಬ್ಯಾಂಕುಗಳು ಗಟ್ಟಿಯಾಗಿರುತ್ತವೋ ಅಲ್ಲಿ ರೈತ ಜೀವಂತವಾಗಿರುತ್ತಾನೆ ಎಂದರು. ಕಾರ್ಯಕ್ರಮದಲ್ಲಿ ಸಹಕರಿಗಳನ್ನ ಸನ್ಮಾನಿಸಲಾಯಿತು. ಟಿ ಎಂ ಎಸ್ ಅಧ್ಯಕ್ಷ ಆರ್ ಎಂ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ  ಮಾತನಾಡಿದರು.