ಬೈಲ್ಪಾರಿನಲ್ಲಿ ಹಾಕಿದ ಮೂರೇ ದಿನಕ್ಕೆ ಕಿತ್ತು ಹೋದ ಡಾಂಬರ್ : ಮರು ಡಾಂಬರೀಕರಣಕ್ಕೆ ಸ್ಥಳೀಯರಿಂದ ಆಗ್ರಹ

ದಾಂಡೇಲಿ : ಡಾಂಬರ್ ಹಾಕಿ ಮೂರೇ ದಿನದೊಳಗೆ ಡಾಂಬರು ಕಿತ್ತು ಹೋಗಿ ಸ್ಥಳೀಯರ ಆಕ್ರೋಶಕ್ಕೆ ಕಾರಣವಾದ ಘಟನೆ ನಗರದ ಬೈಲ್ಪಾರಿನಲ್ಲಿ ಸೋಮವಾರ ನಡೆದಿದೆ.

ಬೈಲ್ಪಾರು ಪ್ರದೇಶ ವ್ಯಾಪ್ತಿಯಲ್ಲಿ ಯುಜಿಡಿ ಪೈಪ್ ಲೈನ್ ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಪೈಪ್ ಲೈನ್ ಅಳವಡಿಸಿದ‌ ಬಳಿಕ ಅಗೆದಿರುವುದನ್ನು ಮುಚ್ಚಿ, ಇದೀಗ ರಸ್ತೆಗೆ ಡಾಂಬರೀಕರಣ ಮಾಡಲಾಗಿತ್ತು. ಯುಜಿಡಿ ಗುತ್ತಿಗೆ ಸಂಸ್ಥೆಯವರು ಡಾಂಬರೀಕರಣ ಮಾಡಿ ಮೂರು ದಿನ ಆಗುವಷ್ಟರೊಳಗೆ ಅವರದ್ದೇ ವಾಹನ ಹೋಗುತ್ತಿದ್ದಾಗ ಡಾಂಬರು ಕಿತ್ತು ಹೋಗಿದೆ. ಡಾಂಬರು ಹಾಕಿ ಮೂರು ದಿನದೊಳಗಡೆ ಕಿತ್ತು ಹೋಗಿರುವುದಕ್ಕೆ ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಸೋಮವಾರ ಮರು ಡಾಂಬರೀಕರಣಕ್ಕೆ ಆಗ್ರಹಿಸಿದ್ದಾರೆ.