ಮನೆ ಮನೆಗೆ ಅಯೋಧ್ಯೆ ಶ್ರೀರಾಮ‌ ಮಂದಿರದ ಮಂತ್ರಾಕ್ಷತೆ & ಆಮಂತ್ರಣ ಪತ್ರಿಕೆ ವಿತರಣಾ ಅಭಿಯಾನಕ್ಕೆ ಚಾಲನೆ

ದಾಂಡೇಲಿ : ಜನವರಿ 22ರಂದು ಅಯೋಧ್ಯೆಯ ಶ್ರೀರಾಮಮಂದಿರ ಲೋಕಾರ್ಪಣೆಯ ಹಿನ್ನಲೆಯಲ್ಲಿ ಅಯೋಧ್ಯೆಯಿಂದ ಬಂದಂತಹ ಪವಿತ್ರ ಮಂತ್ರಾಕ್ಷತೆಯನ್ನು ಮತ್ತು ಆಮಂತ್ರಣ ಪತ್ರಿಕೆಯನ್ನು ನಗರದ ಮನೆ ಮನೆಗಳಿಗೆ ವಿತರಿಸುವ ಅಭಿಯಾನಕ್ಕೆ ಭಾನುವಾರ ನಗರದ ಅಂಬೇವಾಡಿಯಲ್ಲಿರುವ ಶ್ರೀ.ನಾಗದೇವತಾ ದೇವಸ್ಥಾನದಲ್ಲಿ ಚಾಲನೆಯನ್ನು‌ ನೀಡಲಾಯ್ತು.

ಶ್ರೀ.ನಾಗದೇವತಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಚಂದ್ರಕಾಂತ ‌ಕ್ಷೀರಸಾಗರ, ಎಂ.ಎಸ್.ನಾಯ್ಕ, ಎ.ಆರ್.ಪಾಟೀಲ್, ವಿಠ್ಠಲ್ ಬೈಲೂರ್ಕರ್, ವಿನಯ್ ಹುಕ್ಕೇರಿ, ಗೋಪಿ ಸೇಲಾರ್, ಅನ್ನಪೂರ್ಣ ಚೌವ್ಹಾಣ್, ಕವಿತಾ ಪೂಜಾರ, ಗೀತಾ ಕಾಮತ್, ದೀಪಾ, ಗಾಯತ್ರಿ ವಾಡೇಕರ್, ಮೊದಲಾದವರ ತಂಡ‌ ಅಂಬೇವಾಡಿಯಲ್ಲಿ ಮನೆ ಮನೆಗೆ ತೆರಳಿ ಮಂತ್ರಾಕ್ಷತೆಯೊಂದಿಗೆ ಶ್ರೀರಾಮ ದೇವರ ಭಾವಚಿತ್ರ ಮತ್ತು ಆಮಂತ್ರಣ ಪತ್ರಿಕೆಯನ್ನು‌ ವಿತರಿಸಿದರು.