ಲಾರಿ ಹರಿದು ಶಾಲಾ ಮುಖ್ಯೋಪಾಧ್ಯಾಯ ಸಾವು

ಕಾರವಾರ:- ರಸ್ತೆಯಲ್ಲಿ ತೆರಳುತಿದ್ದಾಗ ಬೈಕ್‌ನಿಂದ ಆಯತಪ್ಪಿ ಬಿದ್ದ ಸವಾರನಿಗೆ ಹಿಂಭಾಗದಿಂದ ಲಾರಿ ಹರಿದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಹಬ್ಬುವಾಡದಲ್ಲಿ ನಡೆದಿದೆ.

ಕಾರವಾರ ತಾಲೂಕಿನ ದೇವಳಮಕ್ಕಿ ಗ್ರಾಮದ ಶಾಲೆಯ ಹೆಡ್‌ಮಾಸ್ಟರ್‌ ಉಮೇಶ ಗುನಗಿ (೫೫) ಸಾವು ಕಂಡ ದುರ್ದೈವಿಯಾಗಿದ್ದು ಅಪಘಾತ ಪಡಿಸಿದ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಕಾರವಾರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.