ದೆಹಲಿ: 6 ಸ್ನೇಹಿತರಿಂದ ಅಪ್ರಾಪ್ತ ಬಾಲಕನ ಕೊಲೆ

ಆರು ಮಂದಿ ಸ್ನೇಹಿತರು ಸೇರಿ ಅಪ್ರಾಪ್ತ ಬಾಲಕನ  ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಮೃತನನ್ನು 17 ವರ್ಷದ ವಿವೇಕ್ ಎಂದು ಗುರುತಿಸಲಾಗಿದೆ. ಸ್ನೇಹಿತರಲ್ಲಿ ಒಬ್ಬಾತ ಮದ್ಯಪಾನ ಮಾಡಲೆಂದು ಆತನನ್ನು ಆಹ್ವಾನಿಸಿದ್ದ ಬಳಿಕ ಆರು ಮಂದಿ ಸ್ನೇಹಿತರು ಸೇರಿ ಚಾಕುವಿನಿಂದ ತಿವಿದು, ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾರೆ.

ಸತ್ಪುಲಾ ಪಾರ್ಕ್​ಗೆ ಕರೆದೊಯ್ದು ಹತ್ಯೆ ಮಾಡಲಾಗಿದೆ. ಐವರು ಆರೋಪಿಗಳು ಉದ್ಯಾನದಲ್ಲಿ ಕಾದು ಕುಳಿತಿದ್ದು, ವಿವೇಕ್ ಒಳಗೆ ಬಂದ ತಕ್ಷಣ  ಚಾಕು ಮತ್ತು ಇಟ್ಟಿಗೆಗಳಿಂದ ಹಲ್ಲೆ ನಡೆಸಿದ್ದಾರೆ.

ದೇಹದ ಮುಖ, ಕುತ್ತಿಗೆ, ಎದೆ ಮತ್ತು ಹೊಟ್ಟೆಯ ಮೇಲೆ ಚಾಕು ಗಾಯಗಳಿವೆ ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಚಂದನ್ ಚೌಧರಿ ಹೇಳಿದ್ದಾರೆ. ಶುಕ್ರವಾರ ಬೆಳಗ್ಗೆ 7.30ರ ಸುಮಾರಿಗೆ ಸತ್ಪುಲಾ ಪಾರ್ಕ್‌ನಲ್ಲಿ ಪತ್ತೆಯಾದ ಮೃತದೇಹದ ಕುರಿತು ಪಿಸಿಆರ್ ಕರೆ ಬಂದಿತ್ತು. ಖಿರ್ಕಿ ಗ್ರಾಮದ ಬಳಿ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ, ಹೊಟ್ಟೆ, ಎದೆ, ಕುತ್ತಿಗೆ ಮತ್ತು ಮುಖದ ಮೇಲೆ ಗಾಯದ ಗುರುತುಗಳನ್ನು ಹೊತ್ತಿರುವುದು ಕಂಡುಬಂದಿದೆ.

ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ವಿವೇಕ್​ ವಿರುದ್ಧ ಹಗೆ ಸಾಧಿಸಲು ಈ ಸಂಚು ರೂಪಿಸಿದ್ದರು. ಬಾಲಕ ಮನೆಯಿಂದ ಹೊರಹೋಗುವಾಗ ತಂದೆಯನ್ನು ಭೇಟಿಯಾಗಲು ಹೋಗುವುದಾಗಿ ಸುಳ್ಳು ಹೇಳಿದ್ದ, ಹಿಂದಿರುಗದಿದ್ದಾಗ ಹಲವು ಬಾರಿ ಕರೆ ಮಾಡಿದ್ದಾರೆ ಆದರೆ ಮೊಬೈಲ್ ಸ್ವಿಚ್ಡ್​ ಆಫ್ ಆಗಿತ್ತು ಎಂದು ಪೋಷಕರು ತಿಳಿಸಿದ್ದಾರೆ.