ಅಖಿಲ ಭಾರತ ವಕೀಲರ ಒಕ್ಕೂಟ AILUನ 14ನೇ ರಾಷ್ಟ್ರೀಯ ಸಮ್ಮೇಳನಕ್ಕೆ ರತ್ನದೀಪಾ ಎನ್. ಎಮ್ ಆಯ್ಕೆ

ದಾಂಡೇಲಿ : ಅಖಿಲ ಭಾರತ ವಕೀಲರ ಒಕ್ಕೂಟ AILUನ 14ನೇ ರಾಷ್ಟ್ರೀಯ ಸಮ್ಮೇಳನವು ಪಶ್ಚಿಮ ಬಂಗಾಳ ರಾಜ್ಯದ ಹೌರಾ ನಗರದಲ್ಲಿ ಇದೇ ದಿನಾಂಕ:28-12-2023 ಗುರುವಾರದಿಂದ ದಿನಾಂಕ: 30-12-2023ರ ಶನಿವಾರದವರೆಗೆ ನಡೆಯಲಿದ್ದು, ಈ ಸಮ್ಮೇಳನಕ್ಕೆ ಉತ್ತರ ಕನ್ನಡ ಜಿಲ್ಲೆಯ ಪ್ರತಿನಿಧಿಯಾಗಿ ನಗರದ ನ್ಯಾಯವಾದಿ ಹಾಗೂ ಜನವಾದಿ ಮಹಿಳಾ ಸಂಘಟನೆಯ ತಾಲ್ಲೂಕು ಅಧ್ಯಕ್ಷೆ ರತ್ನದೀಪಾ.ಎನ್.ಎಂ ಅವರು ಆಯ್ಕೆಯಾಗಿದ್ದಾರೆ.