ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಲಂಚಾವತಾರ: ಜಾಗೃತ ಅಧಿಕಾರಿಗಳಿಂದ ತರಾಟೆ, ​ಹಣ ವಾಪಸ್​ ನೀಡಿದ ವೈದ್ಯ, ನರ್ಸ್​

ತುಮಕೂರು, ಡಿಸೆಂಬರ್​ 15: ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಂಚ ತಾಂಡವಾಡುತ್ತಿದೆ. ವೈದ್ಯರು ಹಾಗೂ ಸಿಬ್ಬಂದಿಗಳು ಆಸ್ಪತ್ರೆಗೆ ಬರುವ ಬಡರೋಗಿಯಿಂದ ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೌದು ಪ್ರತ್ಯೆಕ ಎರಡು ಪ್ರಕರಣದಲ್ಲಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಲಂಚ ಸ್ವೀಕರಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಬೆಂಗಳೂರಿನ ಆರೋಗ್ಯ ಸೌದದ ಮುಖ್ಯ ಜಾಗೃತ ಕೋಶದ ಅಧಿಕಾರಿಗಳು ವೈದ್ಯರಿಗೆ ಮತ್ತು ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದು, ಹಣ ವಾಪಸ್​​ ನೀಡಿದ್ದಾರೆ.

ಗರ್ಭಿಣಿಯಿಂದ ನರ್ಸ್ ಲಂಚ ವಾಪಸ್

ಕೊರಟಗೆರೆ ತಾಲೂಕಿನ ಅನುಸೂಯ ಎಂಬವರು ಹೆರಿಗೆಗೆ ಆಸ್ಪತ್ರೆಗೆ ಬಂದಿದ್ದರು. ಗರ್ಭಿಣಿ ಕಡೆಯಿಂದ ನರ್ಸ್​​ ಐದು ಸಾವಿರ ರೂ. ಲಂಪಡೆದಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಜಾಗೃತ ಅಧಿಕಾರಿಗಳು ಅನಸೂಯ ಅವರನ್ನು ಪೋನ್​ ಮೂಲಕ ಸಂಪರ್ಕ ಮಾಡಿದ್ದರು. ನರ್ಸ್​​​ಗೆ ಐದು ಸಾವಿರ ನೀಡಿರುವುದಾಗಿ ಅನುಸೂಯ ಅಧಿಕಾರಿಗಳಿಗೆ ತಿಳಿಸಿದರು. ಕೂಡಲೆ ಅಧಿಕಾರಿಗಳು ನರ್ಸ್​​ ಅನ್ನು ತರಾಟೆಗೆ ತೆಗೆದುಕೊಂಡು, ಗರ್ಭಿಣಿಗೆ ಹಣ ವಾಪಸ್​ ನೀಡುವಂತೆ ಮಾಡಿದರು.

1500 ರೂ. ಲಂಚ ಪಡೆದಿದ್ದ ವೈದ್ಯ

ಮತ್ತೊಂದು ಪ್ರಕರಣದಲ್ಲಿ ಕಣ್ಣಿನ ವೈಧ್ಯ ಡಾ. ಗಂಗಾಧರ ಓರ್ವ ವಿದ್ಯಾರ್ಥಿನಿಯಿಂದ 1500 ರೂ. ಲಂಚ ಪಡೆದಿದ್ದರು. ಈ ಬಗ್ಗೆ ವಿದ್ಯಾರ್ಥಿನಿ ಜಾಗೃದ ಅಧಿಕಾರಿಗಳಿಗೆ ದೂರು ನೀಡಿದ್ದಳು. ಕೂಡಲೆ ಅಧಿಕಾರಿಗಳು ವೈದ್ಯನನ್ನು ತರಾಟೆಗೆ ತೆಗೆದುಕೊಂಡು ಹಣ ವಾವಸ್​ ನೀಡುವಂತೆ ಸೂಚಿಸಿದರು. ಇನ್ನು ವೈದ್ಯರ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ‌‌ ಕೈಗೊಳ್ಳಲು ಸ್ಥಳೀಯರು ಒತ್ತಾಯಿಸಿದ್ದಾರೆ.