ಲಾರಿ ಹಾಗೂ ಕಾರಿನ ನಡುವೆ ಭೀಕರ ಅಪಘಾತ

ಭಟ್ಕಳ: ತಾಲೂಕಿನ ವೆಂಕಟಾಪುರ ಸೇತುವೆಯ ಮೇಲೆ ಲಾರಿ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಲಾರಿ ಮಗುಚಿ ಬಿದ್ದು ಕೆಲ ಕಾಲ ಹೆದ್ದಾರಿಯಲ್ಲಿ ಓಡಾಡುವ ವಾಹನಗಳಿಗೆ ತೊಂದರೆಯಾಯಿತು.

ಕೇರಳದಿಂದ ಪ್ಲೈವುಡ್ ತುಂಬಿಕೊಂಡು ಪುಣೆಗೆ ಹೋಗುತ್ತಿರುವ ಲಾರಿ ಹಾಗೂ ಭಟ್ಕಳದ ಸರ್ಪನಕಟ್ಟೆಯಿಂದ ಶಿರಾಲಿಯ ಕಡೆಗೆ ಹೋಗುತ್ತಿದ್ದ ಕಾರಿನ ನಡುವೆ ಸಂಭವಿಸಿದ ಅಪಘಾಥದಲ್ಲಿ ಕಾರಿನ ಹಿಂಬಾಗ ಸಂಪೂರ್ಣ ನುಜ್ಜು ಗುಜ್ಜಾಗಿದೆ. ಪ್ಲೈವುಡ್ ತುಂಬಿದ ಲಾರಿಯು ಮಗುಚಿ ಬಿದ್ದು ಸಂಪೂರ್ಣ ಪ್ಲೈವುಡ್ ರಸ್ತೆಯಲ್ಲಿಯೇ ಚೆಲ್ಲಿದೆ.

ಕಾರಿನಲ್ಲಿ ಓರ್ವ ಚಾಲಕ ಪ್ರಯಾಣಿಸುತ್ತಿದ್ದ ಹಿನ್ನೆಲೆ ಕಾರಿನ ಹಿಂಬಾಗ ಭಾರೀ ನುಜ್ಜುಗುಜ್ಜಾದರೂ ಚಾಲಕನಿಗೆ ಯಾವುದೇ ಗಾಯಗಳಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಲಾರಿ ಚಾಲಕ ಸಹ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಸ್ಥಳದಲ್ಲಿ ಕಾರನ್ನು ನೋಡಿದವರಿಗೆ ಭೀಕರ ಅಪಘಾತ ಎಂದು ಕಾಣುವಂತಿದ್ದರೂ ಸಹ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದು ಮಾತ್ರ ವಿಚಿತ್ರವಾಗಿದೆ.