ಮಳೆಹಾನಿ ಪ್ರದೇಶಗಳಿಗೆ ಶಾಸಕ ಸುನೀಲ್ ನಾಯ್ಕ್ ಭೇಟಿ: ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಲು ಸೂಚನೆ

ಭಟ್ಕಳ: ತಾಲೂಕಿನ ವಿವಿಧ ನೆರೆ ನೆರೆಪೀಡಿತ ಪ್ರದೇಶಗಳಿಗೆ ಶಾಸಕ ಸುನೀಲ ನಾಯ್ಕ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಬೇಂಗ್ರೆ ಪಂಚಾಯತ ಪಡುಶಿರಾಲಿ, ಮಲ್ಲಾರಿ, ಕೊಪ್ಪ ಪಂಚಾಯತ ಬೆಟ್ಕೂರು, ಕಾಯ್ಕಿಣಿ ಪಂಚಾಯತ ಅಬ್ರೆ ಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣಕ್ಕೆ, ನೀರು ನುಗ್ಗಿರುವ ಮನೆಗಳ ಸ್ವಚ್ಛತೆಗೆ ಪರಿಹಾರ ಬಿಡುಗಡೆಗೆ, ಹಾನಿಗೊಳಗಾದ ರಸ್ತೆ, ಸೇತುವೆಗಳ ಪುನರ ನಿರ್ಮಾಣಕ್ಕೆ ಮಾಹಿತಿಯನ್ನು ಕಲೆ ಹಾಕಿ ಅಗತ್ಯ ಕ್ರಮ ಜರುಗಿಸಿದರು.