ಭಟ್ಕಳದಲ್ಲಿ ‌ಶೆಟರ್‌ ಮುರಿದು ಗ್ಯಾರೇಜ್ ಒಳ ನುಗ್ಗಿದ ಕಳ್ಳರು – 1 ಲಕ್ಷ 40 ಸಾವಿರ ರೂಪಾಯಿ ನಗದು, ಮೊಬೈಲ್‌ ಕದ್ದು ಪರಾರಿ

ಭಟ್ಕಳದಲ್ಲಿ ‌ಶೆಟರ್‌ ಮುರಿದು ಗ್ಯಾರೇಜ್ ಒಳ ನುಗ್ಗಿದ ಕಳ್ಳರು, ನಗದು ಮತ್ತು ಮೊಬೈಲ್‌ ಕದ್ದು ಪರಾರಿಯಾದ ಘಟನೆ ನಡೆದಿದೆ. ಮುಖಕ್ಕೆ ಕಪ್ಪು ಬಣ್ಣದ ಮಾಸ್ಕ್‌ ಧರಿಸಿ ಬಂದಿದ್ದ ಕಳ್ಳರಿಬ್ಬರು ಭಟ್ಕಳದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗ್ಯಾರೇಜ್‌ನ ಶೆಟರ್‌ ಮುರಿದು 1 ಲಕ್ಷ 40 ಸಾವಿರ ರೂಪಾಯಿ ನಗದು ಮತ್ತು ಮೊಬೈಲ್‌ ಕದ್ದು ಪರಾರಿಯಾಗಿದ್ದಾರೆ…



ಮಣ್ಕುಳಿಯ ಶಂಕರ ಶೆಟ್ಟಿ ಮಾಲೀಕತ್ವದ ಗ್ಯಾರೇಜ್ ಇದಾಗಿದ್ದು, ಕಳ್ಳರಿಬ್ಬರು ರಾತ್ರಿ ವೇಳೆ ಗ್ಯಾರೇಜ್‌ನ ಶಟರ್ ಮುರಿದು ಒಳ ನುಗ್ಗಿದ್ದಾರೆ. ಗ್ಯಾರೇಜ್‌ನಲ್ಲಿದ್ದ ಕಪಾಟನ್ನು ಒಡೆದು ಸುಮಾರು ಒಂದು ಲಕ್ಷದ ನಲವತ್ತು ಸಾವಿರ ನಗದು ಹಾಗೂ ಸ್ಯಾಮಸಂಗ್ ಗ್ಯಾಲಕ್ಸಿ ಮೊಬೈಲ್ ಪೋನ ಕದ್ದು ಪರಾರಿಯಾಗಿದ್ದಾರೆ. ಆದರೆ ಕಳ್ಳರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇಬ್ಬರು ಕಳ್ಳರಲ್ಲಿ ಓರ್ವ ಕಳ್ಳ ತನ್ನ ಗುರುತು ಪತ್ತೆಯಾಗಿದಂತೆ ಸಿನಿಮಾದಲ್ಲಿ ಕಳ್ಳತನಕ್ಕೆ ಬಳಸುವ ಕಪ್ಪು ಬಣ್ಣದ ಪ್ಲಾಸ್ಟಿಕ್ ಮಾಸ್ಕ್‌ ಧರಿಸಿದ್ದು ಪತ್ತೆಯಾಗಿದೆ…


ಮುಂಜಾನೆ ಗ್ಯಾರೇಜ್ ಬಳಿ ಬಂದು ನೋಡಿದಾಗ ಕಳ್ಳತನವಾಗಿರುವುದು ತಿಳಿದು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ನಂತರ ಮಧ್ಯಾಹ್ನ ವೇಳೆಗೆ ಕಾರವಾರದಿಂದ ಶ್ವಾನದಳ ತಂಡದಿಂದ ಭೇಟಿ ನೀಡಿ ಪರಿಶೀಲನೆ ನಡೆಸಲಾಯ್ತು. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಸೋಮನಾಥ ರಾಠೋಡ ತನಿಖೆ ಕೈಗೊಂಡಿದ್ದಾರೆ…

ಉದಯ ನಾಯ್ಕ, ನುಡಿ ಸಿರಿ ನ್ಯೂಸ್‌, ಭಟ್ಕಳ