ಹೊನ್ನಾವರದ ತಾಲೂಕಿನ ಅರೇಅಂಗಡಿ ಸಮೀಪ ಹಣಕಾಸಿನ ವಿಚಾರಕ್ಕೆ ಗಲಾಟೆ-ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಕಿರಿಕ್‌


ಹೊನ್ನಾವರ ತಾಲೂಕಿನ ಅರೇಅಂಗಡಿ ಸಮೀಪ ಹಣಕಾಸಿನ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಕುಪಿತಗೊಂಡ ವ್ಯಕ್ತಿಯೊರ್ವ ಮೂವರ ಮೇಲೆ ಟಿಪ್ಪರ್‌ ಹಾಯಿಸಿದ್ದು, ಘಟನೆಯಲ್ಲಿ ಓರ್ವ ಮೃತನಾಗಿ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ..

ಮಂಗಳವಾರ ಮಧ್ಯಾಹ್ನ ಆರೊಳ್ಳಿ ಸೈಕಲ್ ಅಂಗಡಿ ಹತ್ತಿರ ಹಡಿನಬಾಳದ ವಿನಾಯಕ ನಾರಾಯಣ ಭಟ್ ಎಂಬಾತ ಜನಾರ್ಧನ ಕೇಶವ ನಾಯ್ಕ ಎನ್ನುವವನೊಂದಿಗೆ ಹಣದ ವ್ಯವಹಾರದಲ್ಲಿ ಜಗಳ ಮಾಡಿಕೊಂಡಿದ್ದ. ನಂತರ ಅದೇ ವಿಷಯಕ್ಕೆ ಸಂಭಂದಿಸಿದಂತೆ ಅರೇಂಅಗಡಿ ಜನತಾ ಕಾಲೋನಿ ಹತ್ತಿರ ವಿನಾಯಕ ಭಟ್, ಜನಾರ್ದನ ನಾಯ್ಕ ಹಾಗೂ ವಸಂತ ನಾಯ್ಕರನ್ನು ಕೊಲೆ ಮಾಡುವ ಉದ್ದೇಶದಿಂದಲೇ ಈ ರೀತಿ ಮಾಡದ್ದಾನೆ ಎನ್ನಲಾಗಿದೆ.


ಅರೇಅಂಗಡಿಯಲ್ಲಿ ರಸ್ತೆಯ ಪಕ್ಕದಲ್ಲಿ ಆಟೋರಿಕ್ಷಾದ ಹತ್ತಿರ ಜನಾರ್ದನ ಹಾಗೂ ವಸಂತ ನಾಯ್ಕ ಮಾತನಾಡುತ್ತಾ ನಿಂತಿದ್ದ ವೇಳೆ ವಿನಾಯಕ್ ಭಟ್ ಟಿಪ್ಪರ್ ಹಾಯಿಸಿದ್ದಾನೆ ಎನ್ನಲಾಗಿದೆ. ಘಟನೆಯಿಂದ ಆಟೋ ಜಖಂ ಆಗಿದ್ದು, ಆಟೋ ಚಾಲಕ ಓಲ್ವಿನ್ ರವಿ ಲೋಬೋ ತಲೆ ಭಾಗಕ್ಕೆ ಗಂಭೀರ ಗಾಯವಾದ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ವಸಂತ ಹಾಗೂ ಜನಾರ್ದನಗೆ ಗಂಭೀರಗಳಾಗಿದ್ದು, ಕೂಡಲೇ ಹೆಚ್ಚಿನ ಚಿಕಿತ್ಸೆಗೆ ನೆರೆ ಜಿಲ್ಲೆಯ ಆಸ್ಪತ್ರೆಗೆ ಸಾಗಿಸಲಾಗಿದೆ.

ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ವಿನಾಯಕ ಭಟ್ ವಿರುದ್ದ ನೀಡಿದ ದೂರಿನಲ್ಲಿ ವಸಂತ ನಾಯ್ಕ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿ ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಒಟ್ನಲ್ಲಿ ಈ ಘಟನೆಯಿಂದ ಅರೇಅಂಗಡಿ ಜನತೆ ಅಕ್ಷರಶಃ ಬೆಚ್ಚಿಬಿದ್ದಿದ್ದು, ಕ್ಷುಲ್ಲಕ ಕಾರಣಗಳಿಗೆ ಜೀವಹಾನಿ ಮಾಡುವ ಪ್ರಕರಣಗಳು ಮತ್ತೇ ಮತ್ತೇ ಈ ಭಾಗದಲ್ಲಿ ನಡೆಯುತ್ತಿದೆ. ಇನ್ನಾದ್ರೂ ಪೋಲಿಸ್‌ ಇಲಾಖೆ ಇಂತಹ ಪ್ರಕರಣಗಳಿಗೆ ಬ್ರೇಕ್‌ ಹಾಕುತ್ತಾ ಅನ್ನೋದನ್ನು ಕಾದು ನೋಡಬೇಕಿದೆ…