ಶ್ರೀ ಕರಿಕಾನ ಪರಮೇಶ್ವರಿ ಶಿಲಾಮಯ ಮುಖ್ಯದ್ವಾರದ ಮುಂಭಾಗದಲ್ಲಿ ಹಿಂದೂಪರ ಸಂಘಟನೆಯಿಂದ ವಿಶೇಷ ದೀಪೋತ್ಸವ

ಹೊನ್ನಾವರ: ತಾಲೂಕಿನ ಅರೇಅಂಗಡಿ ಸರ್ಕಲ್ ಸಮೀಪ ಇರುವ ಶ್ರೀ ಕರಿಕಾನ ಪರಮೇಶ್ವರಿ ಶಿಲಾಮಯ ಮುಖ್ಯದ್ವಾರದ ಮುಂಭಾಗದಲ್ಲಿ ಹಿಂದೂಪರ ಸಂಘಟನೆಯ ಪ್ರಮುಖರು,ಯುವಕರು 1008 ಹಣತೆ ಬೆಳಗಿಸುವ ಮೂಲಕ ವಿಶೇಷವಾಗಿ ದೀಪೋತ್ಸವ ಆಚರಿಸಿದರು.

ಅರೇಅಂಗಡಿ ಸುತ್ತಮುತ್ತಲಿನ ಯುವಕರು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿ “ನಮೋ ಮತ್ತೊಮ್ಮೆ 2024” ಎನ್ನುವ ಘೋಷ ವಾಕ್ಯದೊಂದಿಗೆ ಈ ಕಾರ್ಯಕ್ರಮ ಆಯೋಜಿಸಿದ್ದರು. ಗ್ರಾಮದ ನೂರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು, ಯುವಕರು, ಸಾರ್ವಜನಿಕರು ಪ್ರೀತಿ, ಶೃದ್ದೆಯಿಂದ ಆಗಮಿಸಿ ದೀಪ ಹಚ್ಚುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು. ಇದೇ ವೇಳೆ ಮುಂದಿನ ಅಮವಾಸ್ಯೆಯವರೆಗೂ ಪ್ರತಿನಿತ್ಯ 108 ಹಣತೆ ಹಚ್ಚುವ ಮೂಲಕ ದೀಪೋತ್ಸವ ಆಚರಣೆಗೆ ಸಂಘಟಕರು ತೀರ್ಮಾನಿಸಿದರು.


ಈ ವೇಳೆ ಹಿಂದೂ ಸಂಘಟನೆಯ ಪ್ರಮುಖರಾದ ವಿಜಯ ಕಾಮತ್, ಸಂಜು ಶೇಟ್, ಮಂಜುನಾಥ ಶೇಟ್, ವಿರೇಂದ್ರ ಮೇಸ್ತ, ಅರ್ಜುನ್ ರಾಯ್ಕರ್, ಗ್ರಾಮ ಪಂಚಾಯತ ಸದಸ್ಯರಾದ ರಜನಿ ನಾಯ್ಕ, ಗಣಪತಿ ಭಟ್, ಕಿರಣ ಹೆಗಡೆ, ಬಿಜೆಪಿ ಮುಖಂಡರು, ಕಾರ್ಯಕರ್ತರು, ನುಡಿಹಬ್ಬ ಸಮಿತಿ ಸದಸ್ಯರು ಹಾಜರಿದ್ದರು.