ಗುಳ್ಳಾಪುರದಲ್ಲಿ ಅಂಗಡಿ ಕಳ್ಳತನ – ಆರೋಪಿಯನ್ನು ಬಂಧಿಸಿದ ಪೋಲೀಸರು

ಯಲ್ಲಾಪುರ ತಾಲೂಕಿನ ಗುಳ್ಳಾಪುರ ಗ್ರಾಮದಲ್ಲಿ ಜನರಲ್‌ ಸ್ಟೋರ್ಸವೊಂದರ ಮೇಲ್ಚಾವಣಿ ತೆಗೆದು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ.ಯಲ್ಲಾಪುರ ತಾಲೂಕಿನ ಗುಳ್ಳಾಪುರ ಗ್ರಾಮದಲ್ಲಿ ಜನರಲ್‌ ಸ್ಟೋರ್ಸವೊಂದರ ಮೇಲ್ಚಾವಣಿ ತೆಗೆದು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಲ್ಲಾಪುರ ಪೋಲೀಸರು ಯಶಸ್ವಿಯಾಗಿದ್ದಾರೆ.

ಅಂಕೋಲಾ ತಾಲೂಕಿನ ಹಳವಳ್ಳಿ ಸಮೀಪದ ಬಾಳೆಗದ್ದೆಯ ಭಾಸ್ಕರ ನಾರಾಯಣ ಸಿದ್ದಿ ಬಂಧಿತ ವ್ಯಕ್ತಿ. ಈತ ಗುಳ್ಳಾಪುರದ ಜಿ.ಆರ್.ಭಟ್ಟರ ವಿಶ್ವಾಸ್ ಜನರಲ್ ಸ್ಟೋರ್ಸ್‌ನ ಮೇಲ್ಛಾವಣಿ ತೆಗೆದು ಒಳನುಗ್ಗಿ 38,000 ರೂ ನಗದು ಕಳ್ಳತನ ಮಾಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದು, ಆತನಿಂದ 14,300 ರೂಪಾಯಿ ವಶಪಡಿಸಿಕೊಳ್ಳಲಾಗಿದೆ.ಎಸ್.ಪಿ ವಿಷ್ಣುವರ್ಧನ್, ಎ.ಎಸ್.ಪಿ ಜಯಕುಮಾರ, ಡಿವೈ.ಎಸ್.ಪಿ ಕೆ.ಎಲ್.ಗಣೇಶ ಅವರ ಮಾರ್ಗದರ್ಶನದಲ್ಲಿ, ಸಿಪಿಐ ರಂಗನಾಥ ನೀಲಮ್ಮನವರ್, ಪಿಎಸ್ಐಗಳಾದ ರವಿ ಗುಡ್ಡಿ, ನಿರಂಜನ ಹೆಗಡೆ, ಶ್ಯಾಮ ಪಾವಸ್ಕರ್, ಎಎಸ್ಐ ವಿಠ್ಠಲ ಮಲವಡಕರ್, ಸಿಬ್ಬಂದಿ ಮಹಮ್ಮದ್ ಶಫಿ, ಬಸವರಾಜ ಹಗರಿ, ಸಂತೋಷ ರಾಠೋಡ, ಗಿರೀಶ ಲಮಾಣಿ, ಪರಶುರಾಮ‌ ಕಾಳೆ, ಪ್ರವೀಣ ಪೂಜಾರ, ಚಿದಾನಂದ ಹಾಗೂ ಶೋಭಾ ನಾಯ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.