ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅಲಂಕೃತಗೊಂಡ ಅಶ್ವಮೇಧ ಎಕ್ಸ್ಪ್ರೆಸ್ ಬಸ್ – ಗಮನ ಸೆಳೆದ ಬಸ್‌ ಚಾಲಕ ಶ್ರೀಧರ್‌ನ ಕನ್ನಡ ಪ್ರೇಮ



ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಾಯುವ್ಯ ಕರ್ನಾಟಕ ಸಾರಿಗೆಯ ಭಟ್ಕಳ – ಕಾರವಾರ ಬಸ್‌ಗೆ ಕನ್ನಡಾಭಿಮಾನವನ್ನು ಹೆಚ್ಚಿಸುವ ವಿಶೇಷ ಅಲಂಕಾರ ಮಾಡಿ, ಕನ್ನಡ ಮಾಣಿಕ್ಯ ಪುನೀತ್‌ ಭಾವಚಿತ್ರ ಒಳಗೊಂಡಂತೆ, ವಿವಿಧ ಕನ್ನಡ ಕವಿಗಳ ಭಾವಚಿತ್ರಗಳನ್ನು ಅಂಟಿಸಿ, ಕನ್ನಡಿಗರಿಗೆಲ್ಲ ಕನ್ನಡದ ಛಾಪು ಮೂಡಿಸಿದ ಬಸ್ ಚಾಲಕ ಶ್ರೀಧರ ಗಣಪತಿ ಹಿಣಿ ಕೊಡಕಣಿಯ ಕನ್ನಡ ಪ್ರೇಮ ಎಲ್ಲರ ಗಮನ ಸೆಳೆಯಿತು. ಇವರು ತಮ್ಮ ಸ್ವಂತ ಖರ್ಚಿನಲ್ಲಿಯೇ ಬಸ್‌ ಸಿಂಗರಿಸಿ, ಅದ್ಧೂರಿಯಾಗಿ ಚಾಲನೆ ಮಾಡಿದ್ರು.

ಸಾರಿಗೆ ಘಟಕದ ವ್ಯವಸ್ಥಾಪಕ ಜನಾರ್ದನ ಎಸ್ ದಿವಾಕರ್‌ ಭುವನೇಶ್ವರಿಯ ಪೂಜೆ ಮಾಡಿ ಬಸ್‌ಗೆ ಚಾಲನೆ ನೀಡಿದ್ರು. ಬಸ್ ನಲ್ಲಿ ಚಾಲನೆ ಮಾಡಿದ ಪ್ರಯಾಣಿಕರೆಲ್ಲ ಚಾಲಕನಿಗೆ ತಾಯಿ ಭುವನೇಶ್ವರಿದೇವಿಯ ಆಶೀರ್ವಾದ ಇರಲಿ ಎಂದು ಹಾರೈಸಿ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡರು.