ನವೆಂಬರ್ 5ರಂದು ಮಧ್ಯಾಹ್ನ 2ರಿಂದ 3.30ರವರೆಗೆ ನಾಡಿನಪ್ರಸಿದ್ದ ಹೃದಯವೈದ್ಯ ಡಾ|ನರಸಿಂಹ ಪೈ ಇವರ ಜೊತೆ ಹೃದಯ ಸಂವಾದ ಕಾರ್ಯಕ್ರಮ

ಹೊನ್ನಾವರ: ನಾಡಿನಪ್ರಸಿದ್ದ ಹೃದಯವೈದ್ಯ ಡಾ|ನರಸಿಂಹ ಪೈ ಇವರ ಜೊತೆ ಹೃದಯ ಸಂವಾದ ಕಾರ್ಯಕ್ರಮವನ್ನು ನಾಮಧಾರಿ ಸಭಾಭವನದಲ್ಲಿ ನವೆಂಬರ್ 5ರಂದು ಮಧ್ಯಾಹ್ನ 2ರಿಂದ 3.30ರವರೆಗೆ ಏರ್ಪಡಿಸಲಾಗಿದೆ.

ಕಳೆದ 20 ವರ್ಷಗಳಿಂದ ಉತ್ತರ ಕನ್ನಡಕ್ಕೆ ಪ್ರತಿ ತಿಂಗಳು ಆಗಮಿಸಿ ಇಲ್ಲಿಯ ರೋಗಿಗಳಿಗೆ ಚಿಕಿತ್ಸೆ ನೀಡುವುದಲ್ಲದೇ ಅಗತ್ಯವಿದ್ದವರಿಗೆ ಮಂಗಳೂರು ಕೆಎಮ್ ಸಿಯಲ್ಲಿ ಆಯುಷ್ಮಾನ್ ಕಾರ್ಡ್ ಇದ್ದವರಿಗೆ ಉಚಿತವಾಗಿ ಹೃದಯ ಚಿಕಿತ್ಸೆ ಮಾಡಿಕೊಡುತ್ತ ಬಂದಿದ್ದಾರೆ. ಎಲ್ಲ ಸಮಯದಲ್ಲೂ ರೋಗಿಗಳ ಕರೆಗೆ ಓಗುಡುವ ಡಾ| ನರಸಿಂಹಪೈ ಉನ್ನತವೈದ್ಯಕೀಯ ಅಭ್ಯಾಸಮಾಡಿದವರು. ಅವರು ಅಂದು ಮೊದಲು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವರು. ನಂತರ ಸಾರ್ವಜನಿಕರೊಂದಿಗೆ ಹೃದಯ ಸಮಸ್ಯೆಯುಳ್ಳವರೊಂದಿಗೆಸಂವಾದ ನಡೆಸುವರು.ನಂತರ ನಗರದ ಗಣ್ಯರು ಅವರು ಕಳೆದ25 ವರ್ಷಗಳಿಂದಹೃದಯ ಸೇವೆ ನೀಡುತ್ತ ಬೆಳ್ಳಿ ಹಬ್ಬ ಆಚರಿಸುವ ಸಂದರ್ಭದಲ್ಲಿ ಡಾ|| ಪೈಯರವನ್ನು ಸನ್ಮಾನಿಸುವರು. ಸಾರ್ವಜನಿಕರು ಆಗಮಿಸಬೇಕೆಂದು ಕಾರ್ಯಕ್ರಮದ ಸಂಯೋಜಕ ಡಾ| ಪ್ರಕಾಶ ವಿ. ನಾಯ್ಕ ಕೋರಿದ್ದಾರೆ. ಜಿಲ್ಲಾ ನಾಮಧಾರಿ ಸಂಘ, ನಾಮಧಾರಿ ಬ್ರದರ್ ಹುಡ್,ನುಡಿಸಿರಿ ವಾಹಿನಿ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದೆ.