ಸಿದ್ದಾಪುರದಲ್ಲಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಿಂದ ನರೇಗಾ ಕಾಮಗಾರಿ ಸ್ಥಳಗಳ ಪರಿಶೀಲನೆ

ಸಿದ್ದಾಪುರ :-ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದೇವರಾಜ ಎಮ್ ಹಿತ್ತಲಕೊಪ್ಪ ಅವರು ತಾಲೂಕಿನ ಕವಂಚೂರು ಗ್ರಾಮ ಪಂಚಾಯತಿಯ ನರೇಗಾ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿ ಪ್ರಗತಿಯಲ್ಲಿರುವ ಕೆರೆ ಮತ್ತು ಸ್ಮಶಾನ ಸುತ್ತ ಹೊರಗಾಲುವೆ ಕಾಮಗಾರಿಗಳ ಪರಿಶೀಲನೆ ನಡೆಸಿದರು.

2023-24 ನೇ ಸಾಲಿನಲ್ಲಿ ಒಂದು ದಿನಕ್ಕೆ 316 ರೂ ಕೂಲಿ ಮೊತ್ತವಿದ್ದು, ತಾಲ್ಲೂಕಿಗೆ 1,50,799 ಮಾನವ ದಿನಗಳ ಗುರಿಯಿದೆ. ಇಲ್ಲಿಯವರೆಗೆ 84,067 ಮಾನವ ದಿನಗಳ ಕಾಮಗಾರಿ ನಡೆಸಲಾಗಿದೆ. ಕೂಲಿಕಾರರು ಬೇರೆ ಸ್ಥಳಕ್ಕೆ ವಲಸೆ ಹೋಗದಂತೆ ಬೇಡಿಕೆಗನುಸಾರವಾಗಿ ಕೂಲಿ ಒದಗಿಸಲಾಗುತ್ತಿದೆ. ಬೇಸಿಗೆಯಲ್ಲಿ ನೀರಿನ ಬರವಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಿಸುವಂತ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ರು…

ದಿವಾಕರ್‌ ನಾಯ್ಕ, ನುಡಿಸಿರಿ ನ್ಯೂಸ್‌, ಸಿದ್ದಾಪುರ