ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ- ನಿಂತಿದ್ದ ಕಾರಿಗೆ ಬೈಕ್‌ ಡಿಕ್ಕಿ ಇಬ್ಬರ ದುರ್ಮರಣ


ಯಲ್ಲಾಪುರ
:- ರಾಷ್ಟ್ರೀಯ ಹೆದ್ದಾರಿ ತಟಗಾರ್‌ ಕ್ರಾಸ್‌ ಬಳಿ ನಿಂತಿದ್ದ ಕಾರಿಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ..

ಅಪಘಾತದಲ್ಲಿ ಮೃತಪಟ್ಟವರನ್ನು ರಾಮನಕೊಪ್ಪದ ದರ್ಶನ ಶ್ರೀಕಾಂತ ಭಂಡಾರಿ (17) ಹಾಗೂ ಹುಣಶೆಟ್ಟಿಕೊಪ್ಪದ ರಾಜೇಶ ಸುರೇಶ ಆಚಾರಿ (18) ಎಂದು ಗುರುತಿಸಲಾಗಿದೆ. ಗಾಯಾಗೊಂಡವನನ್ನು ಮಂಜುನಾಥ ನಗರದ ಜಾಬೀರ್ ಮಹಮ್ಮದ್ ಗೌಸ್ ಎನ್ನಲಾಗಿದೆ.

ಮೂವರು ಬೈಕ್ ಮೇಲೆ ಅತಿವೇಗವಾಗಿ ಬರುತ್ತಿದ್ದ ವೇಳೆ ತಟಗಾರ ಕ್ರಾಸ್ ಬಳಿ ರಸ್ತೆಯ ಬಲಗಡೆ ನಿಲ್ಲಿಸಿದ್ದ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಶ್ರೀಧರ್‌ ಅಣಲಗಾರ್‌, ನುಡಿಸಿರಿ ನ್ಯೂಸ್‌, ಯಲ್ಲಾಪುರ..