BIG BREAKING NEWS ಗೌರಮ್ಮಜ್ಜಿ ಮನೆ ಕುಸಿತ ದುರಂತ: ನಾಲ್ವರ ಪೈಕಿ ಮೂವರ ಶವ ಪತ್ತೆ: ಮುಂದುವರಿದ ಶೋಧ ಕಾರ್ಯ

ಭಟ್ಕಳ: ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಸಿಲುಕಿದ್ದ ಮೂವರ ಶವವನ್ನು ರಕ್ಷಣಾ ಸಿಬ್ಬಂದಿಗಳು ಹೊರತೆಗೆದಿದ್ದಾರೆ. ಭಟ್ಕಳದ ಮುಟ್ಟಳ್ಳಿ ಗ್ರಾಮದಲ್ಲಿ ಮಳೆಯಿಂದ ಲಕ್ಷ್ಮಿ ನಾಯ್ಕ ಎನ್ನುವವರ ಮನೆಯ ಮೇಲೆ ಗುಡ್ಡ ಕುಸಿತವಾಗಿತ್ತು

ಮನೆಯಲ್ಲಿ ನಾಲ್ವರು ಸಿಲುಕಿಕೊಂಡಿದ್ದರು. ನಿರಂತರ ಕಾರ್ಯಾಚರಣೆ ನಡೆಸಿದ ರಕ್ಷಣಾ ತಂಡ ಇದೀಗ ಮೂವರ ಶವಗಳನ್ನು ಹೊರತೆಗೆದಿದೆ. ಮನೆಯ ಯಜಮಾನಿ ಲಕ್ಷ್ಮಿ ನಾರಾಯಣ ನಾಯ್ಕ, ಮಗಳು ಲಕ್ಷ್ಮಿ ನಾಯ್ಕ, ಲಕ್ಷ್ಮಿ ನಾರಾಯಣ ನಾಯ್ಕರ ತಂಗಿ ಮಗ ಪ್ರವೀಣ್ ನಾಯ್ಕ ದೇಹ ಪತ್ತೆಯಾಗಿದ್ದು ಇದೇ ಕುಟುಂಬದ ಅನಂತ್ ದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಶೋಧ ಕಾರ್ಯ ತೀವ್ರಗತಿಯಲ್ಲಿ ಮುಂದುವರಿಸಲಾಗಿದೆ.

ಲಕ್ಷ್ಮಿ ನಾರಾಯಣ ನಾಯ್ಕ (48), ಅವರ ಪುತ್ರಿ ಲಕ್ಷ್ಮಿ ನಾಯ್ಕ (33), ಪುತ್ರ ಅನಂತ ನಾರಾಯಣ ನಾಯ್ಕ (32) ಹಾಗೂ ಸಂಬಂಧಿ ಪ್ರವೀಣ ಬಾಲಕೃಷ್ಣ ನಾಯ್ಕ (20) ಗುಡ್ಡ ಕುಸಿತದಲ್ಲಿ ಸಿಲುಕಿಕೊಂಡಿದ್ದರು.