ಅಕ್ಟೋಬರ್ : 08 ರಂದು ಹಳಿಯಾಳ ತಾಲ್ಲೂಕಿಗೆ ಶೌರ್ಯ ಜಾಗರಣ ರಥ ಯಾತ್ರೆ ಆಗಮನ – ಶ್ರೀಪತಿ ಭಟ್

ಹಳಿಯಾಳ : ಹಿಂದೂ ಧರ್ಮ ಸಂಸ್ಥಾಪನೆ ಹಾಗೂ ಹಿಂದೂ ಧರ್ಮ ರಕ್ಷಣೆಯ ಜಾಗೃತಿಗಾಗಿ ಆಯೋಜಿಸಲಾದ ಶೌರ್ಯ ಜಾಗರಣ ರಥಯಾತ್ರೆಯು ಇದೇ ಅಕ್ಟೋಬರ್:08 ರಂದು ದಾಂಡೇಲಿಯಿಂದ ಹಳಿಯಾಳಕ್ಕೆ ಆಗಮಿಸಲಿದೆ ಎಂದು ವಿಶ್ವಹಿಂದೂ ಪರಿಷತ್ ಹಳಿಯಾಳ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀಪತಿ ಭಟ್ ಅವರು ಶನಿವಾರ ರಾತ್ರಿ ಹಳಿಯಾಳ ಪಟ್ಟಣದಲ್ಲಿ ಮಾಧ್ಯಮಕ್ಕೆ ನೀಡಿದ ಮಾಹಿತಿಯಲ್ಲಿ ತಿಳಿಸಿದರು.

ಅಕ್ಟೋಬರ್: 08 ರಂದು ಹಳಿಯಾಳ ತಾಲೂಕಿನ ಕರ್ಕಾ ಕ್ರಾಸ್ ನಲ್ಲಿ ಶೌರ್ಯ ಜಾಗರಣ ರಥ ಯಾತ್ರೆಗೆ ಚಾಲನೆಯನ್ನು ನೀಡಲಾಗುವುದು.

ತಾಲೂಕಿನ ಸಾತ್ಮನಿ, ಜಾವಳ್ಳಿ, ಯಡೋಗಾ, ಬಿದ್ರೊಳ್ಳಿ, ಪಾಳಾ, ಮಂಗಳವಾಡ, ತೇರಗಾಂವ, ಹವಗಿ, ಹಳಿಯಾಳ ಪಟ್ಟಣದ ಗಣೇಶ ಕಲ್ಯಾಣ ಮಂಟಪ, ಕೆಸರೊಳ್ಳಿ, ಕರ್ಲಕಟ್ಟಾ ದಾಟಿ ಮುಂದೆ‌ ಭಾಗವತಿ ತಲುಪಿ ಅಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು. ಹಿಂದೂ ಧರ್ಮ ಬಾಂಧವರು, ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಹಿಂದೂ ಸಮಾಜದ ಒಗ್ಗಟ್ಟಿನ ಸಂಕಲ್ಪದೊಂದಿಗೆ ಧರ್ಮ ರಕ್ಷಣೆಯ ಉದ್ದೇಶದಿಂದ ನಡೆಯುತ್ತಿರುವ ಈ ರಥಯಾತ್ರೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀಪತಿ ಭಟ್ ಅವರು ಮನವಿಯನ್ನು ಮಾಡಿದ್ದಾರೆ.