ಭಿಕ್ಷುಕನೋರ್ವನಿಂದ ಹಣ ವಸೂಲಿ ಮಾಡುತ್ತಿದ್ದ ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

ದಾಂಡೇಲಿ : ನಗರದ ಜೆ.ಎನ್.ರಸ್ತೆಯ ಮಾರುತಿ ದೇವಸ್ಥಾನದ ಮುಂಭಾಗದಲ್ಲಿ ಇರುತ್ತಿದ್ದ ಮಾನಸಿಕ ಅಸ್ವಸ್ಥ ಭಿಕ್ಷುಕನೋರ್ವನಿಗೆ ಕಾಡಿಸಿ, ಹಿಂಸೆ‌ ನೀಡಿ‌ ಹಣ ವಸೂಲಿ ಮಾಡುತ್ತಿದ್ದ ಮೂವರು ಕುಡುಕರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ನಡೆದಿದೆ.

ಮಾನಸಿಕ‌ ಅಸ್ವಸ್ಥ ಭಿಕ್ಷುಕನೋರ್ವ ತನ್ನ ಪಾಡಿಗೆ ತಾನು ಭಿಕ್ಷೆ‌ ಬೇಡಿ ಜೀವನ‌ ನಡೆಸುತ್ತಿದ್ದ, ಈತನಿಗೆ ಮೂವರು ಕುಡುಕರು ಹಣಕ್ಕಾಗಿ ನಿತ್ಯ ಪೀಡಿಸುತ್ತಿದ್ದರು. ಹಿಂಸೆ ನೀಡಿ ಆತನಿಂದ ಹಣ ವಸೂಲಿ ಮಾಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯ ಸಾರ್ವಜನಿಕರು ಮೂವರು ಕುಡುಕರ ಬಗ್ಗೆ ಪೊಲೀಸರಿಗೆ ಮಾಹಿತಿಯನ್ನು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.