ಅಕ್ಟೋಬರ್ :07 ರಂದು ದಾಂಡೇಲಿಗೆ ಶೌರ್ಯ ಜಾಗರಣ ರಥಯಾತ್ರೆ ಆಗಮನ – ಚಂದ್ರು ಮಾಳಿ

ದಾಂಡೇಲಿ : ಹಿಂದೂ ಧರ್ಮ ಸಂಸ್ಥಾಪನೆ ಹಾಗೂ ಹಿಂದೂ ಧರ್ಮ ರಕ್ಷಣೆಯ ಜಾಗೃತಿಗಾಗಿ ಆಯೋಜಿಸಲಾದ ಶೌರ್ಯ ಜಾಗರಣ ರಥಯಾತ್ರೆಯು ಇದೇ ಅಕ್ಟೋಬರ್:07 ರಂದು ಜೋಯಿಡಾದಿಂದ ದಾಂಡೇಲಿ ನಗರಕ್ಕೆ ಆಗಮಿಸಲಿದೆ ಎಂದು ಬಜರಂಗದಳದ ಜಿಲ್ಲಾ ಸುರಕ್ಷಾ ಪ್ರಮುಖರಾದ ಚಂದ್ರು ಮಾಳಿಯವರು ಇಂದು ಬುಧವಾರ ಸಂಜೆ ಮಾಧ್ಯಮಕ್ಕೆ ನೀಡಿದ ಮಾಹಿತಿಯಲ್ಲಿ ತಿಳಿಸಿದರು.

ಅಕ್ಟೋಬರ್: 07 ರಂದು ದಾಂಡೇಲಿ ನಗರದ ಬೈಲುಪಾರಿಗೆ ಆಗಮಿಸಲಿರುವ ಶೌರ್ಯ ಜಾಗರಣ ರಥಯಾತ್ರೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ. ಈ ಸಂದರ್ಭದಲ್ಲಿ ಹಿಂದೂ ಧರ್ಮ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಚಂದ್ರು ಮಾಳಿಯವರು ಮನವಿಯನ್ನು ಮಾಡಿದ್ದಾರೆ.