ಅಡಿಕೆಗೆ  ಹಳದಿಚುಕ್ಕಿ ರೋಗ ಕಾಣಿಸಿಕೊಂಡಿದ್ದು ರೈತರು ಕಂಗಲಾಗಿದ್ದಾರೆ -ಶಾಸಕ ಭೀಮಣ್ಣ ನಾಯ್ಕ 

ಸಿದ್ದಾಪುರ : ಕ್ಷೇತ್ರದಲ್ಲಿ ಅಡಿಕೆಗೆ  ಹಳದಿಚುಕ್ಕಿ ರೋಗ ಕಾಣಿಸಿಕೊಂಡಿದ್ದು ರೈತರು ಕಂಗಲಾಗಿದ್ದಾರೆ ವಿಷಯ ತಿಳಿದ ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ್  ಸಿದ್ದಾಪುರದಲ್ಲಿ ಬುಧವಾರ  ನಡೆದ ಕೆಡಿಪಿ ಸಭೆಯಲ್ಲಿ ಸೂಕ್ತ ರೀತಿಯಾದಂತಹ ಪರಿಹಾರವನ್ನು ಕಂಡುಹಿಡಿದು ರೈತರು  ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಂಡು ಹಿಡಿದು ಔಷಧಿ ವಿತರಿಸುವಂತೆ ಅಧಿಕಾರಿಗಳಿಗೆ ಶಾಸಕ ಭೀಮಣ್ಣ ನಾಯ್ಕ್ ಸೂಚನೆ ನೀಡಿದ್ದರು. ಗುರುವಾರ  ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರನ್ನು ಭೇಟಿ ಮಾಡಿ ಹಳದಿ ಚುಕ್ಕೆ ರೋಗದಿಂದ ರೈತರ ಕಷ್ಟ ವನ್ನು  ಮನವರಿಕೆ ಮಾಡಿದರು  ಅದಕ್ಕೆ ಸರಕಾರ ಸೂಕ್ತ ಪರಿಹಾರ ಒದಗಿಸಲು ಒಪ್ಪಿದೆ ಎಂದು ಭರವಸೆ ನೀಡಿದ್ದಾರೆ ಎಂದು ಶಾಸಕರ ಕಚೇರಿಯಿಂದ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.