ಖರ್ವಾ ಶ್ರೀ ಸಿದ್ಧಿ ವಿನಾಯಕ ಪ್ರೌಢಶಾಲೆಯ ಭೋಜನಾಲಯದ ಅಡಿಗಲ್ಲು ಸಮಾರಂಭ ನೆರವೇರಿತು‌.

ಹೊನ್ನಾವರ: ಶಾಲೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಭೋಜನಾಲಯ ನಿರ್ಮಾಣವಾಗಲಿದ್ದು,ಶಾಲೆಯ ಪೂರ್ವ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ,ದಾನಿಗಳ,ಶಿಕ್ಷಣ ಪ್ರೇಮಿಗಳ ಸಹಕಾರದಿಂದ ಕಟ್ಟಡ ನಿರ್ಮಾಣವಾಗಲಿದೆ. ಶಾಲಾ ಪೂರ್ವ ವಿದ್ಯಾರ್ಥಿ ಖಲೀಲ್ ರವರು ಭೋಜನಾಲಯದ ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪೂರ್ವ ವಿದ್ಯಾರ್ಥಿಗಳ ಒಕ್ಕೂಟದ ಗೌರವಾಧ್ಯಕ್ಷರಾದ ಟಿ.ಎಚ್.ಗೌಡ, ಉಪಾಧ್ಯಕ್ಷರಾದ ಸತ್ಯಪ್ಪ ನಾಯ್ಕ ,ಆಡಳಿತ ಮಂಡಳಿಯ ನಿರ್ದೇಶಕರಾದ ಗುರುನಾಥ ನಾಯ್ಕ, ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಧರ್ ನಾಯ್ಕ, ಪೂರ್ವ ವಿದ್ಯಾರ್ಥಿಗಳಾದ ಗಜಾನನ ನಾಯ್ಕ, ಮೋಹನ್ ನಾಯ್ಕ, ವೆಂಕಟರಮಣ ಹೆಗಡೆ, ಜಿ.ಕೆ.ಗೌಡ, ಗಣಪತಿ ಹೆಗಡೆ, ಅಷ್ಫಾಕ್ , ಆಂಗ್ಲ ಮಾಧ್ಯಮದ ಮುಖ್ಯ ಶಿಕ್ಷಕರಾದ ಪಿ.ಜಿ.ಹೆಗಡೆ, ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಎಸ್. ಎಲ್ .ನಾಯ್ಕ ಮತ್ತು ದೈಹಿಕ ಶಿಕ್ಷಣ ಶಿಕ್ಷಕರಾದ ಆರ್. ಎಸ್.ನಾಯ್ಕ ಶಿಕ್ಷಕರು ಹಾಗೂ ಪೂರ್ವ ವಿದ್ಯಾರ್ಥಿಗಳು ಮತ್ತು ಊರ ನಾಗರಿಕರು ಉಪಸ್ಥಿತರಿದ್ದರು.