ಭಟ್ಕಳದ ಹೊನ್ನೆಗದ್ದೆಯಲ್ಲಿ ಪಾತಿ ದೋಣಿ ಮುಳುಗಿ ಓರ್ವ ಮೀನುಗಾರ ಸಾವು.

ಭಟ್ಕಳ : ಫಾತಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರನೊರ್ವ ದೋಣಿ ಮುಳುಗಡೆಯಾಗಿ ಸಾವನ್ನಪ್ಪಿರುವ ಘಟನೆ ಭಟ್ಕಳದ ಹೊನ್ನೆಗದ್ದೆಯಲ್ಲಿ ನಡೆದಿದೆ.
ಫಾತಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿ, ಮರಳಿ ದಡಕ್ಕೆ ಬರುತ್ತಿದ್ದ ವೇಳೆ ದೋಣಿ ಮುಳುಗಡೆಯಾಗಿ ಮೀನುಗಾರನೊರ್ವ ಸಾವನ್ನಪ್ಪಿರುವ ಘಟನೆ ಭಟ್ಕಳದ ಹೊನ್ನೆಗದ್ದೆಯಲ್ಲಿ ನಡೆದಿದೆ. ಮೃತ ಮೀನುಗಾರ ಕುಪ್ಪ ಗೋಯ್ದ ಮೊಗೇರ ಎಂದು ತಿಳಿದು ಬಂದಿದೆ. ಈತ ಮೀನು ಹಿಡಿಯಲು ಬಲೆ ತೆಗೆದುಕೊಂಡು ಪಾತಿ ದೋಣಿಯ ಮೇಲೆ ಹೊನ್ನೆಗದ್ದೆ ಸಮೀಪದ ಸಮುದ್ರದಲ್ಲಿ ಬಲೆ ಹಾಕಿ, ಮರಳಿ ದಡಕ್ಕೆ ಬರುವ ವೇಳೆ ಆಕಸ್ಮಿಕ ದೋಣಿ ಪಲ್ಟಿಯಾಗಿ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈತನ ಮೃತ ದೇಹವನ್ನು ಸ್ಥಳೀಯರು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಈ ಬಗ್ಗೆ ಮೃತನ ಮಗ ಯಶೋಧರ ಮೊಗೇರ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದು, ಎಸ್. ಐ.ರಾಜೇಶ್ ಕೊರಗಾ ಪ್ರಕರಣವನ್ನು ದಾಖಲಿಸಿಕೊಂಡು ಶವವನ್ನು ಮಹಜರು ನಡೆಸಿ, ವಾರಿಸುದಾರರಿಗೆ ನೀಡಿದ್ದಾರೆ..