ಕಾರವಾರ ಬಿಜೆಪಿ ನಗರ ಮಂಡಲ ವತಿಯಿಂದ ಗಾಂಧಿಜಿ ಮತ್ತು ಶಾಸ್ತ್ರಿಜಿ ಜಯಂತಿ

ಕಾರವಾರ ಬಿಜೆಪಿ ನಗರ ಮಂಡಲ ವತಿಯಿಂದ ಗಾಂಧಿ ಜಯಂತಿ ಹಾಗೂ ಭಾರತ ರತ್ನ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜೀ ಯವರ ಜನ್ಮ ದಿನವನ್ನು ಕಾರವಾರ ನಗರ ಸಭೆಯ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು. ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜೀ ಯವರ ಭಾವ ಚಿತ್ರಕ್ಕೆ ಹೂವಿನ ಹಾರ ಹಾಕುವ ಮೂಲಕ ಪೂಜೆ ಸಲ್ಲಿಸಿ ಸಿಹಿಯನ್ನು ಹಂಚುವ ಮೂಲಕ ಜಯಂತಿಯನ್ನು ಆಚರಿಸಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ನಗರ ಅಧ್ಯಕ್ಷ ನಾಗೇಶ್ ಕುರಡೇಕರ್ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜೀ ಯವರ ಕೊಡುಗೆ ಅಪಾರ ಇದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನಗರ ಸಭೆ ಸ್ಥಾಯಿ ಸಮಿತಿ ಸದಸ್ಯ ಮನೋಜ್ ಬಾಂದೇಕರ್, ಬಿಜೆಪಿ ಜಿಲ್ಲಾ ಪ್ರಮುಖರಾದ ಸೂರ್ಯ ಪ್ರಕಾಶ, ಮನೋಜ್ ಭಟ್, ಮಾಲಾ ಹುಲಸ್ವಾರ್, ವಂದನಾ ಶಿರೋಡ್ಕರ್, ಪ್ರತಿಮಾ ಲೋಟಲೆಕರ್, ಮಾಜಿ ನಗರಸಭೆ ಉಪಾಧ್ಯಕ್ಷ ಹಾಲಿ ನಗರಸಭೆ ಸದಸ್ಯ ಪಿ. ಪಿ. ನಾಯ್ಕ್, ಮಾಜಿ ಸ್ಥಾಯಿ ಸಮಿತಿ ಸದಸ್ಯೆ ಹಾಲಿ ನಗರಸಭೆ ಸದಸ್ಯ ಸುಜಾತಾ ತಾಮಸೆ ,ನಗರಸಭೆ ಸದಸ್ಯ ಉಲ್ಲಾಸ್ ಕೇಣಿ, ರೋಷನಿ ಮಾಲಸೆಕರ್, ಬಿಜೆಪಿ ಪದಾದಿಕಾರಿಗಳಾದ ಪ್ರದೀಪ ಗುನಗಿ, ಸಾಮಾಜಿಕ ಜಾಲತಾಣದ ಕಿಶನ್ ಕಾಂಬಳೆ. ಅಶೋಕ್ ಗೌಡ, ಅನಮೋಲ್ ರೇವಣಕರ್, ಅಜಿತ್ ಕರ್ಕಿ, ದೇವಿದಾಸ್ ಕಂತ್ರೆಕರ್, ಲಹು ನಾಯ್ಕ್, ಸಂದೇಶ ಶೆಟ್ಟಿ, ನಾಗೇಶ್, ಗಣಪತಿ ಗುನಗಿ, ಜೈರಾಮ್ ಮಾಲಸೆಕರ್, ವಿನಾಯಕ ಶೇಟ್, ಮಹಿಳಾ ಮೋರ್ಚಾ ಪದಾಡದಿಕಾರಿಗಳಾದ ಶುಭಾಂಗಿ ಶಿರೋಡ್ಕರ್, ವೈಶಾಲಿ ತಾಂಡೆಲ್, ದೀಪಾಲಿ ನಾಯ್ಕ, ಸ್ನೇಹಾ ಗಾವಕರ್, ಸಂಗೀತಾ ದೇವಾಡಿಗ, ದೀಪಾ ಪವಾರ್, ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು