ಸಾರ್ವಜನಿಕ ಗಜಾನನೋತ್ಸವದ ಪ್ರಯುಕ್ತ ಪ್ರಸಿದ್ಧ ಕಲಾವಿದರಿಂದ ಯಕ್ಷ ಗಾನ ವೈಭವ

ಯಲ್ಲಾಪುರ:ಪಟ್ಟಣದ ದೇವಿ ಮೈದಾನದಲ್ಲಿ ಸಾರ್ವಜನಿಕ ಗಜಾನನೋತ್ಸವದ ಪ್ರಯುಕ್ತ ಪ್ರಸಿದ್ಧ ಕಲಾವಿದರಿಂದ ಸೋಮವಾರ ರಾತ್ರಿ ಯಕ್ಷ ಗಾನ ವೈಭವ ಕಾರ್ಯಕ್ರಮ ನಡೆಯಿತು.
ಭಾಗವತರಾದ ಪ್ರಸನ್ನ ಭಟ್ಟ ಬಾಳ್ಕಲ್ ಹಾಗೂ ಅನಂತ ಹೆಗಡೆ ದಂತಳಿಗೆ ಅವರು ಹೊಸ್ತೋಟ ಮಂಜುನಾಥ ಭಾಗ್ವತರ ರಾಮಾಯಣ ಪ್ರಸಂಗದಿಂದ ಪಟ್ಟಾಭಿಷೇಕ, ಶ್ರೀರಾಮ ವನಗಮನ, ವಾಲಿ ಮೋಕ್ಷ, ರಾಮ-ರಾವಣರ ಯುದ್ಧದ ಸನ್ನಿವೇಶಗಳ ಪದ್ಯಗಳನ್ನು ಪ್ರಸ್ತುತಪಡಿಸಿದರು.
ಗಣಪತಿ ಭಾಗ್ವತ ಕವಾಳೆ ಹಾಗೂ ನರಸಿಂಹ ಭಟ್ಟ ಹಂಡ್ರಮನೆ ಮದ್ದಲೆವಾದಕರಾಗಿ, ಪ್ರಮೋದ ಹೆಗಡೆ ಕಬ್ಬಿನಗದ್ದೆ ಚಂಡೆವಾದಕರಾಗಿ ಭಾಗವಹಿಸಿದ್ದರು. ಡಾ.ಡಿ.ಕೆ.ಗಾಂವ್ಕರ ಕಾರ್ಯಕ್ರಮ ನಿರ್ವಹಿಸಿದರು. ಗಜಾನನೋತ್ಸವ ಸಮಿತಿ ಕಾರ್ಯದರ್ಶಿ ಸಂಜೀವಕುಮಾರ ಹೊಸ್ಕೇರಿ ಕಲಾವಿದರನ್ನು ಗೌರವಿಸಿದರು.