ಕುಳಗಿ ಸೇತುವೆಯ ಮೇಲಿಂದ ಗಣಪತಿ‌ ಮೂರ್ತಿಗಳನ್ನು ಕಾಳಿ ನದಿಗೆ ಎಸೆದ ಘಟನೆ ನಡೆದಿದೆ.

ದಾಂಡೇಲಿ : ನಗರದ ಕುಳಗಿ ರಸ್ತೆಯಲ್ಲಿರುವ ಕುಳಗಿ ಸೇತುವೆಯ ಮೇಲಿನಿಂದ ಗಣಪತಿ ಮೂರ್ತಿಗಳನ್ನು ನದಿಗೆ ಎಸೆದಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಶನಿವಾರ ರಾತ್ರಿ ಸರಿಸುಮಾರು ಹತ್ತರಿಂದ ಹದಿನೈದು ಗಣೇಶ ಮೂರ್ತಿಗಳನ್ನು ಕುಳಗಿ ಸೇತುವೆಯ ಮೇಲಿನಿಂದ ನದಿಗೆ ಎಸೆಯಲಾಗಿದೆ.

ಕೆಎ:43, ಎಂ: 1865 ಸಂಖ್ಯೆಯ ಮಾರುತಿ ಒಮ್ನಿಯಲ್ಲಿ ಬಂದ ಇಬ್ಬರು ಸೇತುವೆಯ ಮಧ್ಯಭಾಗದಲ್ಲಿ ವಾಹನವನ್ನು ನಿಲ್ಲಿಸಿ ಗಣಪತಿ ಮೂರ್ತಿಗಳನ್ನು ನದಿಗೆ ಎಸೆಯುತ್ತಿರುವ ದೃಶ್ಯ ಕಂಡುಬಂದಿದೆ. ಒಂದು ಅಂದಾಜಿನ ಪ್ರಕಾರ ಮಾರಲು ತಂದಿದಂತಹ ಗಣಪತಿ ಮೂರ್ತಿಗಳನ್ನು ನದಿಗೆ ಎಸೆಯಲಾಗಿದೆ ಎನ್ನಲಾಗುತ್ತಿದೆ. ನದಿಗೆ ಎಸೆಯಲಾದ ಈ ಗಣಪತಿ ಮೂರ್ತಿಗಳು ಪಿಒಪಿ ಮೂರ್ತಿಗಳಾಗಿರುವ ಶಂಕೆ ವ್ಯಕ್ತವಾಗುತ್ತಿದೆ.