ಸರಸ್ವತಿ ಪಿ.ಯು.ಕಾಲೇಜಿನಲ್ಲಿ ಡಾ.ಅಶೋಕ ಪ್ರಭು ಅವರಿಂದ ಸಂವಾದ ಕಾರ್ಯಕ್ರಮ

ಕುಮಟಾ: ವಿಧಾತ್ರಿ ಅಕಾಡೆಮಿಯ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ. ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಅಶೋಕ ಪ್ರಭು ರವರು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಆಧಾರಿತ ಚಿಂತನೆಗಳು ಯುವ ಮನಸ್ಸಿನಲ್ಲಿ ಮೂಡಬೇಕು, ಅದರಿಂದ ಮುಂದಿನ ಐವತ್ತು ವರ್ಷಗಳಲ್ಲಿ ಹೊಸ ಹೊಸ ಆವಿಷ್ಕಾರಗಳಾಗಿ ವಿಶ್ವದಲ್ಲಿ ಭಾರತ ಪ್ರಕಾಶಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮೂಲತಃ ಕುಮಟಾ ತಾಲೂಕಿನ ಕಡ್ನೀರು ಗ್ರಾಮದ ನಿವಾಸಿಯಾಗಿರುವ ಅವರು, ಪ್ರಸ್ತುತ ಅಮೇರಿಕಾದಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ..

ವಿದ್ಯಾರ್ಥಿಗಳ ಜೊತೆ ಮಾತನಾಡಿದ ಅವರು ತಮ್ಮ ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿನ ಅನುಭವಗಳನ್ನು ಹಂಚಿಕೊಂಡರು, ತಂತ್ರಜ್ಞಾನದಲ್ಲಿ ವಿಶ್ವವು ಹೇಗೆ ಬೆಳವಣಿಗೆ ಹೊಂದಿತು ಅದರಿಂದಾದಂತಹ ಬದಲಾವಣೆಗಳು ಏನು?, ಎಂಬುದನ್ನು ಸವಿಸ್ತಾರವಾಗಿ ppt ಮೂಲಕ ತಿಳಿಸಿದರು. ಭಾರತದಲ್ಲಿ ಹಣಕಾಸು ಕ್ಷೇತ್ರದಲ್ಲಿ ಆನ್ಲೈನ್ ಹಣವರ್ಗಾವಣೆ ಎಷ್ಟು ಸಹಾಯವಗಿದೆ ಎಂಬುದನ್ನು ತಿಳಿಸಿದರು. ಪ್ರಸ್ತುತ ವಿದ್ಯಮಾನಗಳಲ್ಲಿ ತಂತ್ರಜ್ಞಾನದ ಅವಶ್ಯಕತೆ ಮತ್ತು ಅದರ ಬಳಕೆಯ ಬಗ್ಗೆ ತಿಳಿಸಿಕೊಟ್ಟರು. ವಿದ್ಯಾರ್ಥಿಗಳಾದ ನಾವು ಮುಂದಿನ ದಿನಗಳಲ್ಲಿ ಹೇಗೆ ನಮ್ಮ ಚಿಂತನೆಗಳ ಮುಖಾಂತರ ಸಮಾಜದಲ್ಲಿ ಅಥವಾ ಪರಿಸರದಲ್ಲಿ ಇರುವಂತಹ ಸಮಸ್ಯೆಗಳಿಗೆ ಪರಿಹಾರದ ದೃಷ್ಟಿಯಲ್ಲಿ ಆವಿಷ್ಕಾರಗಳನ್ನು ಮಾಡಬೇಕಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕೊಂಕಣ ಎಜುಕೇಶನ್ ಟ್ರಸ್ಟ್ ನ ಗೌರವಾನ್ವಿತ ಕಾರ್ಯದರ್ಶಿಗಳಾದ ಶ್ರೀ ಮುರುಳಿಧರ ಪ್ರಭು ಅವರು ಮಾತನಾಡಿ ಈ ಇಳಿ ವಯಸ್ಸಿನಲ್ಲೂ ಡಾ. ಅಶೋಕ ಪ್ರಭು ಅವರ ಹುಮ್ಮಸ್ಸು, ಉತ್ಸಾಹ, ಜೀವನಶೈಲಿ ನಮಗೆಲ್ಲಾ ಸ್ಪೂರ್ತಿಯಾಗಲಿ ಎಂಬುದನ್ನು ತಮ್ಮ ಪ್ರಾಸಾವಿಕದಲ್ಲಿ ತಿಳಿಸಿದರು.

ಪ್ರಾಂಶುಪಾಲರಾದ ಶ್ರೀ ಕಿರಣ ಭಟ್ಟ ಇವರು ಸ್ವಾಗತಿಸಿದರು. ಉಪನ್ಯಾಸಕರಾದ ಶ್ರೀ ಪದ್ಮನಾಭ ಪ್ರಭು ವಂದಿಸಿದರು.

ಈ ಸಂದರ್ಭದಲ್ಲಿ ಕೊಂಕಣ ಎಜುಕೇಶನ್ ಟ್ರಸ್ಟ್ ನ ಶ್ರೀ. ಡಿ ಡಿ ಕಾಮತ, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕರಾದ ಶ್ರೀ ಗುರುರಾಜ ಶೆಟ್ಟಿಯವರು, ಉಪನ್ಯಾಸಕರಾದ ಶ್ರೀ ದೀಪಕ ನಾಯ್ಕ, ಶ್ರೀ ಉಮೇಶ ಪೂಜಾರಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.