ಸ ಹಿ ಪ್ರಾ ಶಾಲೆ ಕಲ್ಲೂರ್ ನಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ಮಹಿತಿಯ ಶಿಬಿರವನ್ನು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ನಡೆಸಲಾಯಿತು

ಸಿದ್ಧಾಪುರ : ತಾಲೂಕಿನ ಸ ಹಿ ಪ್ರಾ ಶಾಲೆ ಕಲ್ಲೂರ್ ನಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ಮಹಿತಿಯ ಶಿಬಿರವನ್ನು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಮುದಾಯ ಆರೋಗ್ಯ ಅಧಿಕಾರಿಗಳಾದ ಡಾ ಅಶ್ವಿನಿ ಯವರು ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ಸ್ವಚ್ಛತೆಯ ಕುರಿತು ಉಪನ್ಯಾಸ ನೀಡಿದರು. ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳ ಕುರಿತು ಹೇಳಿದರುಮಕ್ಕಳ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು. ಮಕ್ಕಳು ಆರೋಗ್ಯಕರವಾದ ಉತ್ತಮ ಅಭ್ಯಾಸ ರೂಢಿಸಿಕೊಳ್ಳಲು ಆರೋಗ್ಯ ಕಾರ್ಯಕರ್ತೆ ಸರಿತಾ ನಾಯ್ಕ ಹೇಳಿದರು ಆಶಾ ಕಾರ್ಯಕರ್ತೆ ಸವಿತಾ ನಾಯ್ಕ ಸಹಕರಿಸಿದರು. ಕಾರ್ಯಕಮದಲ್ಲಿ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು ಮುಖ್ಯಾಧ್ಯಾಪಕ ಶ್ರೀಕಾಂತ ನಾಯ್ಕ ಸ್ವಾಗತಿಸಿ ನಿರ್ವಹಿಸಿದರು.