ವಿಟ್ನಾಳದಲ್ಲಿ ಉಚಿತ ದಂತ ತಪಾಸಣಾ ಶಿಬಿರ

ದಾಂಡೇಲಿ : ಶ್ರೀ.ವಿ.ಆರ್‌.ಡಿ.ಎಂ ಟ್ರಸ್ಟ್ ಹಳಿಯಾಳ, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆ ಮತ್ತು ಕೆ.ಎಲ್.ಇ ದಂತ ಮಹಾವಿದ್ಯಾಲಯ ಬೆಳಗಾವಿ ಇವರ ಸಂಯುಕ್ತ ಆಶ್ರಯದಡಿ ತಾಲೂಕಿನ ವಿಟ್ನಾಳದಲ್ಲಿ ಉಚಿತ ದಂತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಶಿಬಿರವನ್ನು ಅಂಬೇವಾಡಿ ಗ್ರಾ.ಪಂ ಅಧ್ಯಕ್ಷರಾದ ಪ್ರಕಾಶ್.ಜಿ.ಈ ಅವರು ಉದ್ಘಾಟಿಸಿ ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿರುವುದು ಔಚಿತ್ಯಪೂರ್ಣವಾಗಿದೆ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲಕರವಾಗಿದೆ ಎಂದರು.

ಶಿಬಿರದಲ್ಲಿ ಬೆಳಗಾವಿಯ ಕೆ.ಎಲ್.ಇ ದಂತ ಮಹಾವಿದ್ಯಾಲಯದ ಡಾ.ಸಾಗರ್ ಜಾಲಿಹಾಳ, ಡಾ.ಡೇವಿಡ್ ಕುಟಿನ್ನೊ, ಡಾ.ವರ್ಕಿ.ಎನ್.ಎಸ್, ಡಾ.ಪ್ರಜಕ್ತ ಚೌವ್ಹಾಣ್, ಡಾ.ಅನು ಸಾರಾ, ಡಾ.ಕವಿತಾ.ಆರ್, ಡಾ.ಶಿವಶಂಕರಿ.ಟಿ, ಡಾ.ಯುವರಾಣಿ.ಕೆ ಮೊದಲಾದವರು ಭಾಗವಹಿಸಿ ಉಚಿತ ದಂತ ತಪಾಸಣೆಯನ್ನು ನಡೆಸಿಕೊಟ್ಟರು.