ದಾಂಡೇಲಿ ನಗರದ ಮೂರು ನಂ ಗೇಟ್’ನಿಂದ ವೃದ್ಧೆ ನಾಪತ್ತೆ

ದಾಂಡೇಲಿ : ನಗರದ ಬಾಂಬೆಚಾಳದ ನಿವಾಸಿಯಾಗಿರುವ ಕಮಲಮ್ಮ ಮಲ್ಲೇಶ್ ಹರಿಜನ ಅವರು ನಗರದ ಮೂರು ನಂ ಗೇಟ್ ನಲ್ಲಿರುವ ತನ್ನ ಮಗನ ಮನೆಗೆ ಬಂದಿದ್ದವರು ನಾಪತ್ತೆಯಾಗಿರುವ ಘಟನೆ ನಡೆದಿದೆ.

ಕಮಲಮ್ಮ ಮಲ್ಲೇಶ್ ಹರಿಜನ ಎಂಬ 80 ವರ್ಷದ ವೃದ್ಧೆ ಬಾಂಬೆಚಾಲದ ನಿವಾಸಿಯಾಗಿದ್ದು, ಇವರು ತನ್ನ ಮಗ ವೆಂಕಟೇಶ್ ಮಲ್ಲೇಶ್ ಹರಿಜನ ಅವರ ಮೂರು ನಂ ಗೇಟ್ನಲ್ಲಿರುವ ಮನೆಗೆ ಬಂದಿದ್ದರು. ಮಗನ ಮನೆಗೆ ಬಂದವರು ಸೆ:07 ರಂದು ಮಧ್ಯಾಹ್ನ 12 ಗಂಟೆಗೆ ತನ್ನೂರು ಆಂದ್ರಪ್ರದೇಶಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಈವರೇಗೆ ಆಂದ್ರಪ್ರದೇಶಕ್ಕೂ ಹೋಗದೇ, ಇತ್ತ ದಾಂಡೇಲಿಯ ಬಾಂಬೆಚಾಳದಲ್ಲಿರುವ ಅವರ ಮನೆಗೂ ಹೋಗದೇ, ಮೂರು ನಂ ಗೇಟ್ ನಲ್ಲಿರುವ ಮಗನ ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಅವರ ಮಗ ವೆಂಕಟೇಶ್ ಮಲ್ಲೇಶ್ ಹರಿಜನ ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಾಪತ್ತೆಯಾದ ತಾಯಿಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಅಥವಾ ಅವರು ಎಲ್ಲಿಯಾದರೂ ಕಂಡುಬಂದಲ್ಲಿ ದಾಂಡೇಲಿ ನಗರ ಪೊಲೀಸ್ ಠಾಣೆಗೆ ಇಲ್ಲವೇ ತನ್ನ ಮೊಬೈಲ್ ಸಂಖ್ಯೆ : 7760646893ಗೆ ಸಂಪರ್ಕಿಸುವಂತೆ ಶನಿವಾರ ನಗರದಲ್ಲಿ ಮಾಧ್ಯಮದ ಮೂಲಕ ವೆಂಕಟೇಶ್ ಮಲ್ಲೇಶ್ ಹರಿಜನ ಅವರು ಮನವಿ ಮಾಡಿದ್ದಾರೆ.