ಭಟ್ಕಳ: ಅಕ್ರಮವಾಗಿ ನಡೆಸುತ್ತಿರುವ ಚಿರೆಕಲ್ಲು ಕ್ವಾರಿ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ

ಭಟ್ಕಳ: ಅಕ್ರಮವಾಗಿ ನಡೆಸುತ್ತಿರುವ ಚಿರೆಕಲ್ಲು ಕ್ವಾರಿ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಕಲ್ಲು ಕ್ವಾರಿ ಕೆಲಸಕ್ಕೆ ಬಳಸುವ 4 ಎಂಜಿನಗಳನ್ನು ವಶಕ್ಕೆ ಪಡೆದು ಮುರುಡೇಶ್ವ ಪೊಲೀಸ ಠಾಣೆಯ ವಶಕ್ಕೆ ನೀಡಿದ ಘಟನೆ ಬೆಂಗ್ರೆ ಪಂಚಾಯತ 2 ರಲ್ಲಿ ನಡೆದಿದೆ.

ಗಣಿ ಮತ್ತು  ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಯಾದ  ಆಶಾ ಎಂ.ಎಸ್. ನೇತೃತ್ವದಲ್ಲಿ  , ಭೂವಿಜ್ಞಾನಿಗಳಾದ ಹರೀಶ್ ಕೆ.ಎಸ್  ಮತ್ತು  ಸುಬಾಷಚಂದ್ರ ಎಸ್ ಹಾಗೂ ಸಿಬ್ಬಂದಿಗಳು ಮತ್ತು  ಕಂದಾಯ ನಿರೀಕ್ಷಕರಾದ  ಶ್ರೀನಿವಾಸ  ಆರ್ ಮಾಸ್ತಿ ಮತ್ತು ಗ್ರಾಮ ಆಡಳಿತಾಧಿಕಾರಿಗಳಾದ  ಲತಾ ಎಸ್‌  ನಾಯ್ಕ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.