ಭಟ್ಕಳ:ಮನೆಯ ಬಾಗಿಲನ್ನು ಒಡೆದು ಲಕ್ಷಾಂತರ ರು. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ಹಾಗೂ ನಗದನ್ನು ಕದ್ದು ಪರಾರಿ

ಭಟ್ಕಳ: ಮನೆಯಲ್ಲಿ ಯಾರೂ ಇಲ್ಲದೆ ಇರುವುದನ್ನು ಖಚಿತಪಡಿಸಿಕೊಂಡ ಅನಾಮಿಕ ಕಳ್ಳರು, ಮನೆಯ ಬಾಗಿಲನ್ನು ಒಡೆದು ಒಳ ಪ್ರವೇಶಿಸಿ ಲಕ್ಷಾಂತರ ರು. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ಹಾಗೂ ನಗದನ್ನು ಕದ್ದು ಪರಾರಿಯಾಗಿರುವ ಘಟನೆ ಸೋನಾರ
ಕೇರಿ ವಿ.ಟಿ ರಸ್ತೆಯಲ್ಲಿ ನಡೆದಿದೆ.

ತಾಲೂಕಿ ನಸೋನಾರ ಕೇರಿ ವಿ.ಟಿ ರಸ್ತೆಯಲ್ಲಿರುವ ರಾಘವೇಂದ್ರ ಭಾಸ್ಕರ್ ಶೇಟ್ ಎನ್ನುವವರ ಮನೆ ಕಳ್ಳತನವಾಗಿದ್ದು. ಮನೆಯಲ್ಲಿ ಯಾರೂ ಇಲ್ಲದೆ ಇರುವುದನ್ನು ಗಮನಿಸಿದ ಕಳ್ಳರು ಮನೆಯ
ಬೀಗ ಮುರಿದು ಓಳ ಹೋದ ಕಳ್ಳರು ಮನೆಯ
ಅಲ್ಮೇರಾ ಮೀಟಿ ಅದರಲ್ಲಿನ ಸುಮಾರು 1,26,000 ರೂ ಮೌಲ್ಯದ ಒಟ್ಟು ಸುಮಾರು 63 ಗ್ರಾಂ ತೂಕದ
ಬಂಗಾರ ಹಳೆಯ ಆಭರಣಗಳು ಹಾಗೂ 7500 ರೂ ಮೌಲ್ಯದ ಒಟ್ಟು 195 ಗ್ರಾಂ ತೂಕದ ಹಳೆಯ ಬೆಳ್ಳಿಯ ಆಭರಣಗಳು ಮತ್ತು ತನ್ನ ಮನೆಯ ಖರ್ಚಿಗೆ ಇಟ್ಟು ಕೊಂಡಿದ್ದ ಸುಮಾರು 10 ರಿಂದ 15 ಸಾವಿರ ರೂ
ನಗದು ಹಣವನ್ನು ಕಳುವು ಮಾಡಿಕೊಂಡು ಪರಾರಿಯಾಗಿದ್ದಾರೆ.

ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ