ಹಿಂದು ಧರ್ಮದ ಕುರಿತು ಅವಹೇಳನ ಮಾಡುತ್ತಿರುವ ಯಲಿಷಾ ಯಲಕಪಾಟಿ ಅವರನ್ನು ಗಡಿಪಾರು ಮಾಡುವಂತೆಲ್ಲಾಧಿಕಾರಿಗಳಿಗೆ ಮನವಿ

ಯಲ್ಲಾಪುರ: ಹಿಂದು ಧರ್ಮದ ಕುರಿತು ಅವಹೇಳನ ಮಾಡುತ್ತಿರುವ ಯಲಿಷಾ ಯಲಕಪಾಟಿ ಅವರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಯುವ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪಟ್ಟಣದಲ್ಲಿ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಯಲಿಷಾ ಯಲಕಪಾಟಿ ಎಂಬಾತ ಬೇರೆ ರಾಜ್ಯದಿಂದ ಕಾರವಾರಕ್ಕೆ ಬಂದು ನೆಲೆಸಿದ್ದು, ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಹಿಂದು ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾನೆ. ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದ್ದಾನೆ. ಇವನ ವಿರುದ್ಧ ಕಾನೂನು ಕ್ರಮದ ಜೊತೆಗೆ, ಗಡಿಪಾರು ಮಾಡುವಂತೆ ಆಗ್ರಹಿಸಿದರು.
ವೇದಿಕೆಯ ಅಧ್ಯಕ್ಷ ಅರ್ಜುನ ಬೆಂಗೇರಿ, ಜಿಲ್ಲಾ ಮುಖ್ಯ ಕಾರ್ಯದರ್ಶಿ ಸುಭಾಷ ಶೇಷಗಿರಿ, ವಾಲ್ಮಿಕೀ ಸಮುದಾಯದ ಮುಖಂಡ ಹನುಮಂತ ನಾಯ್ಕ, ಪ್ರಮುಖರಾದ ಪ್ರಸಾದ ಹೆಗಡೆ, ಪ್ರಭು ಚಿಂಚಕಂಡಿ, ಪುರಂದರ ತಿಕ್ಕಟ್ಟೆ ಇದ್ದರು.