ಸೆಪ್ಟೆಂಬರ್ :10 ರಂದು ದಾಂಡೇಲಿಯ ಶ್ರೀ.ರಾಘವೇಂದ್ರ ಮಠದಲ್ಲಿ ಕೃಷ್ಣ ರಾಧೆಯರ ಛದ್ಮವೇಷ ಸರ್ಧೆ

ದಾಂಡೇಲಿ: ನಗರದ ಸಹೇಲಿ ಟ್ರಸ್ಟ್ ಆಶ್ರಯದಲ್ಲಿ ನಡೆಯಲಿರುವ ಗೋಕುಲಾಷ್ಟಮಿ ಕೃಷ್ಣೋತ್ಸವ ಕಾರ್ಯಕ್ರಮದಲ್ಲಿ ಕೃಷ್ಣ ರಾಧೆಯರ ಛದ್ಮವೇಷ ಸರ್ಧೆಯನ್ನು ಆಯೋಜಿಸಿಲಾಗಿದೆ ಎಂದು ಸಹೇಲಿ ಟ್ರಸ್ಟ್ ಅಧ್ಯಕ್ಷೆ ಮೀನಾಕ್ಷಿ ಕನ್ಯಾಡಿ ತಿಳಿಸಿದ್ದಾರೆ.

ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 8 ವರ್ಷದೊಳಗಿನ ಮಕ್ಕಳಿಗೆ ಕೃಷ್ಣ ರಾಧೆಯರ ವೇಷದಲ್ಲಿ ಯಶೋಧರೆ ಪಾತ್ರದ ತಾಯಿಯೊಂದಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತರು ಸೆ. 5 ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಸೆ. 10ರಂದು ನಗರದ ಶ್ರೀ.ರಾಘವೇಂದ್ರ ಸ್ವಾಮಿ ಮಠದಲ್ಲಿ ಸಂಜೆ 4.30 ಕ್ಕೆ ಸ್ಪರ್ಧೆ ಆರಂಭಗೊಳ್ಳಲಿದೆ. ಭಾಗವಹಿಸುವ ಎಲ್ಲ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಗುತ್ತದೆ. ವಿಶೇಷ ಆಕರ್ಷಕ ಛಧ್ರವೇಷಕ್ಕೆ ವಿಶೇಷ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತದೆ. ಆಸಕ್ತರು 948303844, 6363449235 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದೆಂದು ಮೀನಾಕ್ಷಿ ಕನ್ಯಾಡಿಯವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಹೇಲಿ ಟ್ರಸ್ಟಿನ‌ ಪದಾಧಿಕಾರಿಗಳು ಹಾಗೂ ಸದಸ್ಯೆಯರು ಉಪಸ್ಥಿತರಿದ್ದರು.