ಯಲ್ಲಾಪುರ: ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರಾವಣ ಶುಕ್ರವಾರದ ಪ್ರಯುಕ್ತ ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ

ಯಲ್ಲಾಪುರ: ತಾಲೂಕಿನ ಬೆಳಖಂಡ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರಾವಣ ಶುಕ್ರವಾರದ ಪ್ರಯುಕ್ತ ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.
ದೇವಸ್ಥಾನದ ಪುರೋಹಿತ ವೇ.ಮಂಜುನಾಥ ಜೋಶಿ ಮಾಗೋಡ ಅವರ ಮಾರ್ಗದರ್ಶನದಲ್ಲಿ ಲಲಿತಾ ಸಹಸ್ರನಾಮ ಪಠಣದೊಂದಿಗೆ ಮಾತೆಯರು ಕುಂಕುಮಾರ್ಚನೆ ನೆರವೇರಿಸಿದರು. ಕಳೆದ ವರ್ಷ ಶ್ರಾವಣ ಮಾಸದಲ್ಲಿ ಕುಂಕುಮಾರ್ಚನೆ ನೆರವೇರಿಸಿವಂತೆ ಸರ್ಕಾರದಿಂದ ಸೂಚನೆ ಬಂದಿತ್ತು. ಅದರಂತೆ ಕಾರ್ಯಕ್ರಮ ನೆರವೇರಿಸಲಾಗಿತ್ತು. ಈ ಬಾರಿ ದೇವಸ್ಥಾನದ ಆಡಳಿತ ಸಮಿತಿಯವರೇ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕುಂಕುಮಾರ್ಚನೆಯಲ್ಲಿ ಸುತ್ತಮುತ್ತಲಿನ ಮಾತೆಯರು ಭಕ್ತಿಯಿಂದ ಪಾಲ್ಗೊಂಡಿದ್ದರು.
ಈ ವೇಳೆ ನಾರಾಯಣ ಭಟ್ಟ ಮರಿಯನಪಾಲ, ಪರಮೇಶ್ವರ ಕೋಣೆಮನೆ, ವೆಂಕಟರಮಣ ಭಟ್ಟ ಅಚ್ಚೆಕೇರಿ, ಸುಬ್ರಾಯ ಕೋಣೆಮನೆ, ಮಹಾಬಲೇಶ್ವರ ಹೆಗಡೆ ಕುಂಟೆಮನೆ, ಅರ್ಚಕ ನಾರಾಯಣ ಭಟ್ಟ, ಗಂಗಾ ಭಟ್ಟ, ಶಾಂತಾ ಕೋಣೆಮನೆ, ಪಾರ್ವತಿ ಭಟ್ಟ, ಗೀತಾ ಭಟ್ಟ, ಗಾಯತ್ರಿ ಭಟ್ಟ, ಉಮಾಹಮೇಶ್ವರಿ ಭಟ್ಟ, ಲಕ್ಷ್ಮೀ ಭಟ್ಟ, ಅನ್ನಪೂರ್ಣ ಹೆಗಡೆ, ಭಾಗೀರತಿ ಭಟ್ಟ, ಭಾರತಿ ಭಟ್ಟ, ನಾಗರತ್ನಾ ಭಟ್ಟ ಇತರರಿದ್ದರು.