ಮಂಕಾಳ ವೈದ್ಯರ ಸ್ವಗೃಹದಲ್ಲಿ ಜನತಾ ದರ್ಶನ ಕಾರ್ಯಕ್ರಮ

ಭಟ್ಕಳ:  ಮುರುಡೇಶ್ವರದಲ್ಲಿರು ಸಚಿವ ಮಂಕಾಳ್ ವೈದ್ಯರ ಸ್ವಗ್ರಹದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು. ಸಚಿವ ಮಂಕಾ ವೈದ್ಯರು ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ ಸಮಸ್ಯೆಯನ್ನು ಆಲಿಸಿದರು

ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೇಲೆ ನೂರಾರು ಆಸೆಗಳು ಜಿಲ್ಲೆಯ ಜನತೆಯಲ್ಲಿ ಮೊಳಗಿದ್ದವು. ಈ ಮೊದಲು ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತವರೆಲ್ಲರೂ ಬಹುತೇಕರು ಹೊರಗಿನವರೇ ಆಗಿದ್ದು ಜಿಲ್ಲೆಯ ಸಚಿವರು ಅತಿ ವಿರಳ. ಆದರೆ ಅಪರೂಪಕ್ಕೆ ಎಂಬಂತೆ ಜಿಲ್ಲೆಯವರಿಗೆ ಸಚಿವ ಸ್ಥಾನ ಹಾಗೂ ಉಸ್ತುವಾರಿ ಹೊಣೆ ಎರಡು ಸಿಕ್ಕಿದ್ದರಿಂದ ಸಹಜವಾಗಿ ಅಭಿವೃದ್ಧಿಯ ಕನಸು ಜನತೆಯಲ್ಲಿ ಮನೆ ಮಾಡಿತ್ತು. ಅದರಂತೆ ತಮ್ಮ ಕೆಲಸದ ಒತ್ತಡದಲ್ಲೂ ಕೂಡ ವಾರಕ್ಕೊಮ್ಮೆ ಸಚಿವ ಮಂಕಾಳ್ ವೈದ್ಯರವರು ತಮ್ಮ ಕ್ಷೇತ್ರದ ಮತದಾರರಿಗೆಗಾಗಿ ತಮ್ಮ ಮುರುಡೇಶ್ವದಲ್ಲಿರುವ ಸ್ವಗ್ರಹದಲ್ಲಿ ನಡೆಯುವ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ ಬರುವ ಸಾರ್ವಜನಿಕರ ಕಷ್ಟಗಳನ್ನೆಲ್ಲ ಆಲಿಸಿ ಅವರ ಕಷ್ಟಕ್ಕೆ ಸ್ಪಂದಿಸಿದರು.

ತಮ್ಮ ಸ್ವಗ್ರಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಮಂಕಾಳ್ ವೈದ್ಯ ಸಾಮಾನ್ಯರಂತೆ ಮನೆ ಅಂಗಳದಲ್ಲಿದ್ದ ಕಟ್ಟೆಯ ಮೇಲೆ ಕೂತು ಕೆಲ ಕಾಲ ಜನ ಸಾಮಾನ್ಯರ ಸಮಸ್ಯೆ ಆಳಿಸಿದರು