ಕೆನರಾ ಬ್ಯಾಂಕಿನಲ್ಲಿರುವ ಖಾತೆಯಿಂದ ಹಣ ಕಡಿತ : ಗ್ರಾಹಕ ಪ್ರದೀಪ್ ಗವಸ ಆಕ್ರೋಶ

ದಾಂಡೇಲಿ : ನಗರದ ಜೆ.ಎನ್.ರಸ್ತೆಯಲ್ಲಿರುವ ಕೆನರಾ ಬ್ಯಾಂಕಿನಲ್ಲಿ ಉಳಿತಾಯ ಮತ್ತು ಓಡಿ ಖಾತೆಯನ್ನು ಹೊಂದಿರುವ ಖಾತೆದಾರರ ಖಾತೆಯಿಂದ ಯಾವುದೇ ಸೂಚನೆಯನ್ನು ನೀಡದೇ ಹಣ ಕಟ್ ಮಾಡುತ್ತಿದ್ದು, ಇದರಿಂದ ಗ್ರಾಹಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಸ್ವತ: ತೊಂದರೆಗೊಳಗಾದ ಬ್ಯಾಂಕಿನ ಗ್ರಾಹಕರು ಹಾಗೂ ನಗರದ ಲೋಕೋಪಯೋಗಿ ಗುತ್ತಿಗೆದಾರರಾದ ಪ್ರದೀಪ್ ಗವಸ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಇಂದು ನಗರದ ಕೆನರಾ ಬ್ಯಾಂಕಿನ ಮುಂಭಾಗದಲ್ಲಿ ಮಾಧ್ಯಮದ ಮೂಲಕ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಮನವಿಯನ್ನು ಮಾಡಿದ್ದಾರೆ. ಕ್ರೇಡಿಟ್ ಕಾರ್ಡ್ ರದ್ದಾಗಿ ಒಂದು ವರ್ಷದ ಮೇಲಾಗಿದ್ದರೂ ಈಗಲೂ ಹಣ ಕಡಿತಗೊಳಿಸಲಾಗುತ್ತಿದೆ. ಈ ಬಗ್ಗೆ ಬ್ಯಾಂಕಿನ ಅಧಿಕಾರಿಗಳಲ್ಲಿ ಮಾತನಾಡಿದಾಗ ಕ್ರೇಡಿಟ್ ಕಾರ್ಡ್ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಹಣ ಮಾತ್ರ ಕಡಿತವಾಗುತ್ತಲೆ ಇದೆ. ಇನ್ನೂ ಓಡಿ ಖಾತೆಯಿಂದ ರೂ: 12,009.03 ಮೊತ್ತವನ್ನು ಕಡಿತಗೊಳಿಸಲಾಗಿದೆ. ಸದ್ರಿ ಹಣದ ಬಗ್ಗೆ ಕೇಳಿದಾಗ ಅದನ್ನು ಸಪಡಿಸುತ್ತೇವೆ ಎಂದಿದ್ದರೂ, ಈವರೇಗೆ ಅದನ್ನು ಸರಿ ಮಾಡಿಲ್ಲ. ಎಂದು ಪ್ರದೀಪ್ ಗವಸ ಅವರು ದೂರಿದ್ದಾರೆ.