ಮಂಡ್ಯ: ನಿರ್ಮಾಪಕ ಚಂದ್ರಶೇಖರ್ ಮನೆಗೆ ಕನ್ನ, ಬಾಗಿಲು ಮುರಿದು ಲಕ್ಷಾಂತರ ಹಣ, ಚಿನ್ನ ದೋಚಿ ಪರಾರಿ

ಮಂಡ್ಯ, :  ಸಿನಿಮಾ ನಿರ್ಮಾಪಕ(producer) ಚಂದ್ರಶೇಖರ್ ಅವರ ಮನೆಗೆ ಖದೀಮರು ಕನ್ನ ಹಾಕಿದ್ದಾರೆ. ಮಂಡ್ಯ ತಾಲೂಕಿನ ಹೊಸ ಬೂದನೂರು ಗ್ರಾಮದಲ್ಲಿ ಮನೆ ಬಾಗಿಲು ಮುರಿದು ಕಳ್ಳತನ ಮಾಡಿದ್ದಾರೆ. ನಿರ್ಮಾಪಕ ಚಂದ್ರಶೇಖರ್ ಬೆಂಗಳೂರಿನಲ್ಲಿ ವಾಸವಾಗಿದ್ದರು. ಈ ಹಿನ್ನೆಲೆಯಲ್ಲಿ ಮನೆಗೆ ಬೀಗ ಹಾಕಲಾಗಿತ್ತು. ಇದನ್ಜು ಗಮನಿಸಿದ ಖದೀಮರು,  ಬಾಗಿಲು ಮುರಿದು ಮನೆಯಲ್ಲಿ 3 ಲಕ್ಷ ರೂ. ನಗದು ಹಣ ಹಾಗೂ 35 ಗ್ರಾಂ ಚಿನ್ನ ದೋಚಿ ಪರಾರಿಯಾಗಿದ್ದಾರೆ. ಇನ್ನು ಸ್ಥಳಕ್ಕೆ‌ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ಪರಿಶೀಲನೆ ಮಾಡಿದ್ದು, ಈ ಬಗ್ಗೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆ ಬೀಗ ಮುರಿದು ಕಳ್ಳತನ ಮಾಡ್ತಿದ್ದವ ಅರೆಸ್ಟ್

ಬೆಂಗಳೂರು, : ಮತ್ತೊಂದೆಡೆ ಬೆಂಗಳೂರಿನಲ್ಲಿ ಮನೆ ಬೀಗ ಮುರಿದು ಕಳ್ಳತನ ಮಾಡ್ತಿದ್ದವನನ್ನು ಜ್ನಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ಬಂಧಿತ ಅರೋಪಿ. ಮನೆ ಬೀಗ ಹಾಕಲಾಗಿದ್ದ ಮನೆಗಳೇ ಈತನ ಟಾರ್ಗೆಟ್. ಮೊದಲಿಗೆ ಓಡಾಡಿ ಯಾವೆಲ್ಲ ಮನೆಗಳು ಬೀಗ ಹಾಕಿವೆ ಎಂದು ನೋಡುತ್ತಿದ್ದ ಬಳಿಕ ಮನೆ ನುಗ್ಗಿ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದ. ಇದೀಗ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಅರೋಪಿ ಬಳಿ ಮೂರುವರೆ ಲಕ್ಷ ಮೌಲ್ಯದ ಚಿನ್ನದ ಆಭರಣಗಳು ವಶಕ್ಕೆ ಪಡೆಯಲಾಗಿದೆ.