ಪದ್ಮಶ್ರೀ ಪುರಸ್ಕೃತ ಎಮ್.ವೆಂಕಟೇಶ ಕುಮಾರ್ ಅವರನ್ನು ಭೇಟಿಯಾದ ಭಾರತೀಯ ಸಂಗೀತ ವಿದ್ಯಾಲಯದ ನಿಯೋಗ

ದಾಂಡೇಲಿ : ಕಾರ್ಯಕ್ರಮದ ನಿಮಿತ್ತ ನಗರಕ್ಕೆ ಆಗಮಿಸಿದ್ದ ಖ್ಯಾತ ಹಿಂದೂಸ್ತಾನಿ ಗಾಯಕ ಹಾಗೂ ಪದ್ಮಶ್ರೀ ಪುರಸ್ಕೃತ ಎಮ್.ವೆಂಕಟೇಶ ಕುಮಾರ್ ಅವರನ್ನು ನಗರದ ಭಾರತೀಯ ಸಂಗೀತ ವಿದ್ಯಾಲಯದ ಪ್ರವರ್ತಕರಾದ ಸಂಗೀತ ಗುರು ಪಂ.ಚಂದ್ರಶೇಖರ್.ಎಸ್, ಗಾಯಕರಾದ ರಘುವೀರ ಗೌಡ, ಕೊಡಲು ವಾದಕ ಜೈತ್.ಸಿ.ಎಸ್ ಮತ್ತು ಕಾಳಿ ಉತ್ಸವ ಸಮಿತಿಯ ಅಧ್ಯಕ್ಷರಾದ ಇಲಿಯಾಸ್ ಕಾಟಿಯವರನ್ನೊಳಗೊಂಡ ನಿಯೋಗ ಭೇಟಿಯಾಗಿ ಕೆಲ ಹೊತ್ತು ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಎಮ್.ವೆಂಕಟೇಶ ಕುಮಾರ್ ಅವರು ಭಾರತೀಯ ಸಂಗೀತ ವಿದ್ಯಾಲಯದ ಸಾಧನೆಯನ್ನು ಹಾಗೂ ಬೆಳೆದು ಬಂದ ಹಾದಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.