ಭಿಕ್ಷುಕನ ಅಂತ್ಯಕ್ರಿಯೆ ನೆರವೇರಿಸಿದ ಸಮಾಜ ಸೇವಕ ಮಂಜು ಮುಟ್ಟಳ್ಳಿ

ಭಟ್ಕಳ: ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ಭಿಕ್ಷುನೋರ್ವನ ಮೃತ ದೇಹವನ್ನು ಸಮಾಜ ಸೇವಕ ಮುಟ್ಟಳ್ಳಿ ಮಂಜು ಇಲ್ಲಿನ ಮೂಢ ಭಟ್ಕಳ ರುಧ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.

ಮೃತ ಭಿಕ್ಷುಕನನ್ನು ರಘು ಶಂಕರನಾಗ (38) ಹಾವೇರಿ ಎಂದು ತಿಳಿದು ಬಂದಿದೆ. ಈತ ತನ್ನ ತಾಯಿಯೊಂದಿಗೆ ಭಟ್ಕಳ ಹಾಗೂ ಮುರುಡೇಶ್ವರ ಭಾಗದಲ್ಲಿ ಪ್ರತಿ ನಿತ್ಯ ಭಿಕ್ಷಾಟನೆ ಮಾಡುತ್ತಿದ್ದನು. ಗುರುವಾರ ಸಂಜೆ ವೇಳೆ ಮುರುಡೇಶ್ವರ ರೈಲ್ವೆ ನಿಲ್ದಾಣ ಸಮೀಪ ಮದ್ಯ ಸೇವಿಸಿ ಬಿದ್ದವನನ್ನು 108 ಅಂಬ್ಯುಲೆನ್ಸ್ ನಲ್ಲಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಈ ಬಗ್ಗೆ ಮೃತನ ತಾಯಿಯಿಂದ ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತನ ತಾಯಿ ಹಾಗೂ ಆಕೆಯ ಸಂಬಂಧಿಕರೋರ್ವ ಇರುವುದರಿಂದ ಮುರುಡೇಶ್ವರ ಪೊಲೀಸರು ಸಮಾಜ ಸೇವಕ ಮಂಜು ಮುಟ್ಟಳ್ಳಿಯವರನ್ನು ಸಂಪರ್ಕಿಸಿ ಅಂತ್ಯಕ್ರಿಯೆ ನಡೆಸಲು ಕೋರಿಕೊಂಡಾಗ  ಆತನ ಮೃತ ದೇಹವನ್ನು ಸಮಾಜ ಸೇವಕ ಮಂಜು ಮುಟ್ಟಳ್ಳಿ ಮೂಢ ಭಟ್ಕಳ ರುಧ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ

ಈ ವೇಳೆ ಇವರಿಗೆ ಮೃತ ಭಿಕ್ಷುಕನ ಸಂಬಂಧಿ ಹಾಗೂ ಆಂಬ್ಯುಲೆನ್ಸ್ ಚಾಲಕ ಎವರೆಸ್ಟ್ ಸಾತ್ ನೀಡಿದರು