ಹಳಿಯಾಳ ಪಟ್ಟಣದ ಹುಸೇನ್ ಸರ್ವರ್ ಕಾಶಿಮ್ ದುಲೆ ಮಕಾನಗೆ ಶಾಸಕ ಆರ್.ವಿ.ದೇಶಪಾಂಡೆ ಭೇಟಿ

ಹಳಿಯಾಳ : ಪಟ್ಟಣದ ವಿ.ಆರ್.ಡಿ ರಸ್ತೆಯಲ್ಲಿರುವ ಹುಸೇನ್ ಸರ್ವರ್ ಕಾಶಿಮ್ ದುಲೆ ಮಕಾನಗೆ ಶಾಸಕರಾದ ಆರ್.ವಿ.ದೇಶಪಾಂಡೆಯವರು ಇಂದು ಶನಿವಾರ ಸಂಜೆ ಭೇಟಿ ನೀಡಿ ಆಶೀರ್ವಾದವನ್ನು ಪಡೆದರು.

ಸಾಮರಸ್ಯ ಮತ್ತು ಭಾವೈಕ್ಯತೆಯ ಪ್ರತೀಕ ಎಂದೇ ಸಾರುವ ಹಬ್ಬಗಳಲ್ಲಿ ಮೊಹರಂ ಪ್ರಮುಖವಾಗಿದ್ದು, ಯಾವುದೇ ತಾರತಮ್ಯವಿಲ್ಲದೇ ಸರ್ವಧರ್ಮೀಯರು ಪಾಲ್ಗೊಳ್ಳುವ ಮೂಲಕ ಆಚರಣೆಯಲ್ಲಿರುವ ಮೊಹರಂ ಹಬ್ಬವು ಸರ್ವ ಜನಾಂಗದವರಿಗೆ ಶಾಂತಿ ಭಾವೈಕ್ಯತೆಯ ಸಂದೇಶ ಸಾರಿದೆ ಎಂದು ಇದೇ ಸಂದರ್ಭದಲ್ಲಿ ಆರ್.ವಿ.ದೇಶಪಾಂಡೆ ಅವರು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಮುಸ್ಲಿಂ ಮುಖಂಡರು ಮತ್ತು ಮುಸ್ಲಿಂ‌ ಹಾಗೂ ವಿವಿಧ ಧರ್ಮ ಬಾಂಧವರು ಉಪಸ್ಥಿತರಿದ್ದರು