ಅಂಬೇವಾಡಿಯಲ್ಲಿ ರಸ್ತೆಯ ಹೊಂಡಕ್ಕೆ ಸಿಲುಕಿ ಬಿದ್ದ ದ್ವಿಚಕ್ರ ವಾಹನ : ಸವಾರನಿಗೆ ಗಾಯ

ದಾಂಡೇಲಿ : ಬಂಗೂರನಗರ ಜ್ಯೂನಿಯರ್ ಕಾಲೇಜಿನ ಹತ್ತಿರ ನಗರದ ಪ್ರಮುಖ ರಸ್ತೆಯಾಗಿರುವ ಬರ್ಚಿ ರಸ್ತೆಯಲ್ಲಿ ಬೃಹದ್ದಾಕಾರದ ಹೊಂಡಗಳು ನಿರ್ಮಾಣವಾದ ಹಿನ್ನಲೆಯಲ್ಲಿ ದ್ವಿಚಕ್ರ ವಾಹನವೊಂದು ಹೊಂಡಕ್ಕೆ ಸಿಲುಕಿ ಬಿದ್ದು, ಸವಾರ ಗಾಯಗೊಂಡ ಘಟನೆ ಶನಿವಾರ ನಡೆದಿದೆ.

ಈ ರಸ್ತೆಯಲ್ಲಿ ಸಾಕಷ್ಟು ಹೊಂಡಗಳು ನಿರ್ಮಾಣವಾಗಿದ್ದು, ಪ್ರತಿನಿತ್ಯ ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಎದ್ದು ಬಿದ್ದು ಸಂಚಾರಿಸಬೇಕಾದ ಸ್ಥಿತಿಯಿದ್ದು, ಕೂಡಲೆ ಸಂಬಂಧಪಟ್ಟವರು ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ.