ಹಳೆದಾಂಡೇಲಿಯಲ್ಲಿ ಹದಗೆಟ್ಟ ಮುಖ್ಯ ರಸ್ತೆ : ದುರಸ್ತಿಗಾಗಿ ಆಗ್ರಹ

ದಾಂಡೇಲಿ : ನಗರದ ಹಳೆದಾಂಡೇಲಿಯ ಮುಖ್ಯರಸ್ತೆ ತೀವ್ರ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ. ಇದೇ ಹಳೆದಾಂಡೇಲಿಯಿಂದ ಹಳಿಯಾಳ, ಅಳ್ನಾವರಕ್ಕೆ ಕುಡಿಯುವ ನೀರು ಕೊಂಡೊಯ್ಯಲು ರಸ್ತೆ ಬದಿ ಹೊಂಡ ತೋಡಿ ಪೈಪ್ ಗಳನ್ನು ಅಳವಡಿಸಿರುವುದು ಒಂದೆಡೆಯಾದರೇ ಇನ್ನೊಂದೆಡೆ ಯುಜಿಡಿ ಕಾಮಗಾರಿಯಿಂದಾಗಿ ಇಲ್ಲಿ ರಸ್ತೆ ಹದಗೆಟ್ಟು, ಅಲ್ಲಲ್ಲಿ ಬೃಹದ್ದಾಕರದ ಹೊಂಡ ಗುಂಡಿಗಳು ನಿರ್ಮಾಣವಾಗಿದೆ. ಅದು ಇದೀಗ ಮಳೆ ಸಮಯದಲ್ಲಂತೂ ಈ ರಸ್ತೆಯ ಸ್ಥಿತಿ ಹೇಳತೀರದು. ಈ ರಸ್ತೆ ಅವ್ಯವಸ್ಥೆಯನ್ನು ಕೂಡಲೆ ಸರಿಪಡಿಸಿ, ದುರಸ್ತಿ ಮಾಡಿಕೊಡುವಂತೆ ನಗರದ ಹಿರಿಯ ಸಾಮಾಜಿಕ ಹೋರಾಟಗಾರರು ಮತ್ತು ಹಿರಿಯ ವರ್ತಕರಾದ ವಿಷ್ಣು ಕಾಮತ್ ಅವರು ಹಳೆದಾಂಡೇಲಿಯಲ್ಲಿ ಮಾಧ್ಯಮದ ಮೂಲಕ ಆಗ್ರಹಿಸಿದ್ದಾರೆ.