ಕೇರವಾಡದ ಕೆರೆ ಒಡೆದ ಸಂದರ್ಭದಲ್ಲಿ ಕೊಚ್ಚಿಕೊಂಡು ಹೋದ ಮಹಿಳೆ ಮತ್ತು ಮಕ್ಕಳು : ಸ್ಥಳೀಯರಿಂದ ರಕ್ಷಣೆ

ದಾಂಡೇಲಿ : ನಗರದ ಸಮೀಪದಲ್ಲಿರುವ ಕೇರವಾಡದ ಕೆರೆ ಒಡೆದ ಸಂದರ್ಭದಲ್ಲಿ ಕೆರೆಯ ನೀರು ಹಾಲಮಡ್ಡಿ ಭಾಗದ ಜನವಸತಿ ಪ್ರದೇಶ ಸೇರಿದಂತೆ, ಮನೆಗಳಿಗೆ ಹಾಗೂ ಹೊಲ ಗದ್ದೆಗಳಿಗೆ ನುಗ್ಗಿ ಅಪಾರ ಹಾನಿಯಾಗಿದ್ದು, ಒಂದಡೆಯಾದರೆ, ಮನೆ ಮುಂಭಾಗದಲ್ಲಿ ನಿಂತಿದ್ದ ಸ್ಥಳೀಯ ನಿವಾಸಿ ರೇಣುಕಾ ಮತ್ತು ಆಕೆಯ ಮಕ್ಕಳಿಬ್ಬರು ಹಾಗೂ ನಾಯಿಯು ಕೊಚ್ಚಿಕೊಂಡು ಹೋಗಿದ್ದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ. ಅದೃಷ್ಟವಶಾತ್ ಸ್ಥಳೀಯರು ತಕ್ಷಣವೆ ನೀರಿಗೆ ಧುಮುಕಿ ಕೊಚ್ಚಿಕೊಂಡು ಹೋಗುತ್ತಿದ್ದ ರೇಣುಕಾ ಮತ್ತು ಆಕೆಯ ಇಬ್ಬರು ಮಕ್ಕಳು ಹಾಗೂ ಸಾಕು ನಾಯಿಯನ್ನು ರಕ್ಷಿಸಿದ್ದಾರೆ.