ಮಳೆಯಿಂದಾಗಿ ಹಾನಿಯಾದ 7 ಜನ ಸಂತ್ರಸ್ತರಿಗೆ ಸರ್ಕಾರದ ಪರಿಹಾರಧನದ ಆದೇಶಪತ್ರವನ್ನು ಹಸ್ತಾಂತರಿಸಿದ ಶಿವರಾಮ ಹೆಬ್ಬಾರ್

ಯಲ್ಲಾಪುರ: ತಾಲೂಕಿನಲ್ಲಿ ಮಳೆಯಿಂದಾಗಿ ಮನೆಗೆ ಹಾನಿಯಾದ ಹಾಗೂ ಜಾನುವಾರುಗಳನ್ನು ಕಳೆದುಕೊಂಡ 7 ಜನ ಸಂತ್ರಸ್ತರಿಗೆ ಬುಧವಾರ ಶಾಸಕರ ಕಾರ್ಯಾಲಯದಲ್ಲಿ ಸರ್ಕಾರದ ಪರಿಹಾರಧನದ ಆದೇಶಪತ್ರವನ್ನು ಶಾಸಕ ಹಸ್ತಾಂತರಿಸಿದರು.
ವಾಸ್ತವ್ಯದ ಮನೆ ಕುಸಿದು ಹಾನಿಯಾದ ಉಮ್ಮಚಗಿ ಗ್ರಾ.ಪಂ ವ್ಯಾಪ್ತಿಯ ತಾರೇಹಳ್ಳಿಯ ಗೀತಾ ಸಿದ್ದಿ ಅವರಿಗೆ 1.20 ಲಕ್ಷ ರೂಪಾಯಿ ಪರಿಹಾರ ಹಾಗೂ ಜಾನುವಾರುಗಳನ್ನು ಕಳೆದುಕೊಂಡ ಡೋಮಗೇರಿ ಗ್ರಾಮದ ಮಾಳು ಕೊಕರೆ, ಗೋಯಾ ಕೊಕರೆ, ಬಾಳು ಕೊಕರೆ, ಸಹಸ್ರಳ್ಳಿ ಗ್ರಾಮದ ವೆಂಕಟರಮಣ ಭಟ್, ಕಂಚಿನಳ್ಳಿ ಗ್ರಾಮದ ಜಿಮ್ಮು ಶಿಂಧೆ ಅವರಿಗೆ ತಲಾ 37,500 ರೂಪಾಯಿ, ಚಿಮಣಿಮಾಳ ಗ್ರಾಮದ ವಿಠ್ಠು ಜಂಗ್ಲೆ ಅವರಿಗೆ 75,000 ರೂಪಾಯಿಗಳ ಪರಿಹಾರ ಧನದ ಆದೇಶ ಪತ್ರವನ್ನು ಶಾಸಕರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ ಸಿ.ಜಿ.ನಾಯ್ಕ ಇದ್ದರು.