ಚಾಂಪಿಯನ್ಸ್ ಡೊಜೋ ಕರಾಟೆ ವಿದ್ಯಾರ್ಥಿಗಳ ಸಾಧನೆ

ಸಿದ್ದಾಪುರ : ಗಂಗಾವತಿಯಲ್ಲಿ ನಡೆದ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಸಿದ್ದಾಪುರ ಕರಾಟೆ ತರಬೇತಿ ಕೇಂದ್ರದ ಕಥಾ ಹಾಗೂ ಕುಮಿಟಿ ವಿಭಾಗದ ವಿದ್ಯಾರ್ಥಿಗಳಾದ ಕಾರ್ತಿಕ್ ತೃತೀಯ ಸ್ಥಾನ ಜೇಂಕಾರ್ ಆಶಿತಾ ಹರ್ಷಿತ್ ದ್ವಿತೀಯ ಸ್ಥಾನ ಹಾಗೂ ಶಿರಸಿ ಹುಲಿಯಪ್ಪ ದೇವಸ್ಥಾನ ದಲ್ಲಿ ನಡೆಯುವ ಕರಾಟೆ ತರಬೇತಿ ಕೇಂದ್ರದ ವಿದ್ಯಾರ್ಥಿನಿಯಾದ ಸಾಧನ ಪ್ರಥಮ ಸ್ಥಾನ , ವಿವೇಕಾನಂದ ನಗರದ ವರಸಿದ್ಧಿ ವಿನಾಯಕ ದೇವಸ್ಥಾನದ ಕರಾಟೆ ತರಬೇತಿ ಕೇಂದ್ರದ ವಿದ್ಯಾರ್ಥಿಯಾದ ಮೃದಲಾ ದ್ವಿತೀಯ ಸ್ಥಾನವನ್ನು ಪಡೆದು ಕೊಂಡಿದ್ದಾರೆ ಇವರ ಸಾಧನೆಗೆ ವಿದ್ಯಾರ್ಥಿಗಳ ಪಾಲಕರು ಹಾಗೂ ಸಾರ್ವಜನಿಕರು ಮತ್ತು ಚಾಂಪಿಯನ್ಸ್ ಡೋಜೊ ದ ತರಬೇತಿದಾರ ಆನಂದ ಕೃಷ್ಣ ನಾಯ್ಕ ರವರು ಸಂತಸ ವ್ಯಕ್ತಪಡಿಸಿದ್ದಾರೆ .