ಪುಡಿ ರೌಡಿಗಳ ಹಾವಳಿ: ಠಾಣೆಗೆ ಕರೆಸಿ ವಾರ್ನ್​​ ಮಾಡಿದ ಹೆಚ್ಚುವರಿ ಎಸ್​ಪಿ ಪುರುಷೋತ್ತಮ್

ಬೆಂಗಳೂರು ಗ್ರಾಮಾಂತರ, ಜುಲೈ 23: ಏರಿಯಾದಲ್ಲಿ ಹವಾ ಮೆಂಟೇನ್ ಮಾಡಲು ಲಾಂಗು, ಮಚ್ಚುಗಳನ್ನು ಹಿಡಿದು ಓಡಾಡುತ್ತಿದ್ದ ರೌಡಿಶೀಟರ್​ಗಳನ್ನು ಆನೇಕಲ್​ ಠಾಣೆಗೆ ಕರೆಸಿದ ಅಡಿಷನಲ್ SP ಪುರುಷೋತ್ತಮ್ ಎಚ್ಚರಿಕೆ ನೀಡಿದ್ದಾರೆ. ಆನೇಕಲ್ ಉಪವಿಭಾಗದಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದ್ದು, ಕಳೆದೊಂದು ತಿಂಗಳಿಂದ ಪೊಲೀಸರ ನಿದ್ದೆಗೆಡಿಸಿದ್ದರು.

ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ 102 ರೌಡಿಶೀಟರ್​ಗಳ ಪೈಕಿ 46 ರೌಡಿಶೀಟರ್​​ಗಳನ್ನು ಪೊಲೀಸ್ ಠಾಣೆಗೆ ಕರೆಸಿ ಫುಲ್ ಗ್ರಿಲ್​ ಮಾಡಲಾಗಿದೆ. ಭೂಮಾಫಿಯಾ, ಹಫ್ತಾ ವಸೂಲಿ, ಗಲಾಟೆ, ಬೆದರಿಕೆ ಹಾಕದಂತೆ ಎಚ್ಚರಿಕೆ ನಿಡಿದ್ದಾರೆ. ಜೊತೆಗೆ ಠಾಣಾ ಪೊಲೀಸರಿಗೂ ಹೆಚ್ಚುವರಿ SP ಪುರುಷೋತ್ತಮ್ ವಾರ್ನ್​ ಮಾಡಿದ್ದಾರೆ.

ಆನೇಕಲ್: ತಿಂದ ಮನೆಗೆ ಖದೀಮರು ಕನ್ನ ಹಾಕಿರುವಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್​ನಲ್ಲಿ ನಡೆದಿದೆ. ಆನೇಕಲ್ ಉಪವಿಭಾಗದ ಹೆಬ್ಬಗೋಡಿ ಪೋಲೀಸರ ಯಶಸ್ವಿ ಕಾರ್ಯಾಚರಣೆ ನಡೆಸುವ ಮೂಲಕ ಮಹೇಂದ್ರ ಸಿಂಗ್, ಜಗಮಲ್ ಸಿಂಗ್​ನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಬ್ಬರು ರಾಜಸ್ಥಾನ ಮೂಲದವರು ಮನೆಯ ಬಾಗಿಲು ಮುರಿದು ಕೈಚಳಕ ತೋರಿದ್ದ ಅಸಾಮಿಗಳು ಬೊಮ್ಮಸಂದ್ರ ಸಮೀಪದ ಯಾರಂಡಹಳ್ಳಿಯ ಕನ್ನಿಕಾನಗರದ ಮನೆಯಲ್ಲಿ ಕಳ್ಳತನ ಸರ್ವಣ್ ಭಾರತಿ ಎಂಬುವವರ ಮನೆಯಲ್ಲಿ ಕಳ್ಳತನ 25 ಲಕ್ಷ ಹಣವನ್ನ ಕದ್ದು ಎಸ್ಕೇಪ್ ಆಗಿದ್ದ ಅಸಾಮಿಗಳು ಗುಟ್ಕಾ ವ್ಯಾಪಾರಿಯಾಗಿದ್ದ ಸರ್ವಣ್ ಭಾರತಿ ಸರ್ವಣ್ ಭಾರತಿ ಬಳಿ ಕೆಲಸ ಮಾಡುತ್ತಿದ್ದ ರಾಜಸ್ಥಾನದ ಮೂಲದ ಮಹೇಂದ್ರ ಸಿಂಗ್ ಗುಟ್ಕಾ ಮಾರಾಟ ಹಣ ಮಾಲೀಕ ಸರ್ವಣ್ ಗೆ ಬಂದಿರುವುದನ್ನ ತಿಳಿದಿದ್ದ ಮಹೇಂದ್ರ ಸಿಂಗ್ ಚೆನೈನಲ್ಲಿದ್ದ ಸ್ನೇಹಿತ ಜಗಮಲ್ ಸಿಂಗ್ ಜೊತೆ ಸೇರಿ ಸ್ಕೇಚ್ ಹಾಕಿದ್ದ ಮಹೇಂದ್ರ ಸಿಂಗ್ ಅದರಂತೆಯೇ ಕಳೆದ 19 ನೇ ತಾರೀಖಿನಂದು ಲೋಡ್ ಇಳಿಸಿ ಬರಲು ಹೋಗಿದ್ದ ಸರ್ವಣ್ ಈ ವೇಳೆ 25 ಲಕ್ಷ ಹಣ ಕದ್ದಿದ್ದ ಅಸಾಮಿಗಳು ಕದ್ದ ಹಣವನ್ನ ತೆಗದುಕೊಂಡು ಹೋಗಿದ್ದ ಜಗಮಲ್ ಸಿಂಗ್ ಮನೆಯಲ್ಲಿದ್ದ ಹಣ ಕಳ್ಳತನವಾಗಿರುವ ಬಗ್ಗೆ ಹೆಬ್ಬಗೋಡಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲು ಸರ್ವಣ್ ಬಳಿ ಕೆಲಸ ಮಾಡುತ್ತಿದ್ದ ಮಹೇಂದ್ರ ಸಿಂಗ್ ನನ್ನು ಕರೆತಂದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ\ ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ಸಿಯಾದ ಹೆಬ್ಬಗೋಡಿ ಪೋಲೀಸರು.