ಶಿಕ್ಷಕ ಪಿ .ಟಿ. ನಾಯ್ಕವರಿಗೆ ನಿವೃತ್ತಿ ಸನ್ಮಾನ


ಸಿದ್ದಾಪುರ- ಮಲೆನಾಡ ಪ್ರೌಢಶಾಲೆ ಕಾವಂಚೂರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಪಿ.ಟಿ. ನಾಯ್ಕ ಗೋಳಗೋಡ ಅವರ ನಿವೃತ್ತಿ ನಿಮಿತ್ತ ಸನ್ಮಾನ ಸಮಾರಂಭ ನೆರವೇರಿತು.
ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯಶಿಕ್ಷಕ, ಸಾಹಿತಿ ಜಿ. ಜಿ. ಹೆಗಡೆ ಬಾಳಗೋಡ ರವರು ಮಾತನಾಡಿ, ಪಿ.ಟಿ. ನಾಯ್ಕ ಗೋಳಗೋಡರವರು ಕಾರ್ಯಾಲಯದ ಪ್ರಥಮ ದರ್ಜೆ ಸಹಾಯಕರಾಗಿ ೪೧ ವರ್ಷ ಉತ್ತಮ ಸೇವೆ ನೀಡಿದ್ದಾರೆ. ಶಾಲೆಯ ಪ್ರಗತಿ ಹಂತದಲ್ಲಿ ತಮ್ಮ ಕ್ರಿಯಾಶೀಲ ಸೇವೆ ನೀಡಿದ್ದಾರೆ. ಶಾಲೆಯ ಪ್ರಗತಿ ಹಂತದಲ್ಲಿ ತಮ್ಮ ಕ್ರಿಯಾಶೀಲ ಸೇವೆ ನೀಡಿ ವಿದ್ಯಾರ್ಥಿ ಹಾಗೂ ಪಾಲಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ಹೇಳಿ ಪ್ರೌಢಶಾಲೆ ಪರವಾಗಿ ಹಾಗೂ ವೈಯಕ್ತಿಕವಾಗಿ ಸನ್ಮಾನಿಸಿದರು.
ಸ್ಥಳೀಯ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ವಿ. ಕೆ. ಮಾಡಿವಾಳರವರು ಅತಿಥಿಯಾಗಿ ಶಾಲಾ ಬೆಳವಣಿಗೆಯಲ್ಲಿ ಕಛೇರಿಯ ಶಿಸ್ತು ಹಾಗೂ ಕರ್ತವ್ಯ ಪ್ರಜ್ಞೆ ಮುಖ್ಯವಾದುದು ಎಂದು ಹೇಳಿದರು.
ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ವೀರಭದ್ರ ನಾಯ್ಕ ಮಲವಳ್ಳಿ ರವರು ಅತಿಥಿಯಾಗಿ ಮಾತನಾಡಿ, ವಿದ್ಯಾಸಂಸ್ಥೆ ಊರಿಗೊಂದು ಆಸ್ತಿ. ಅದನ್ನು ಬೆಳೆಸುವಲ್ಲಿ ಎಲ್ಲರೂ ಸಹಕರಿಸಬೇಕು ಎಂದರು.
ತಾ.ಪಂ. ಮಾಜಿ ಸದಸ್ಯ ನಾಸೀರಖಾನ್ ವಲ್ಲೀಖಾನ್ ಸಾಬ್ ನೆಜ್ಜೂರು ಅವರು ಮಾತನಾಡಿ ಪಿ.ಟಿ. ನಾಯ್ಕ ರವರು ದೀರ್ಘಕಾಲದ ಸೇವೆ ನೀಡಿ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ ಎಂದರು.