ಸಿದ್ದಾಪುರ : ತಾಲೂಕಿನ ಮುಗದುರ್ ನಲ್ಲಿರುವ ಪುನೀತ್ ರಾಜಕುಮಾರ್ ಅನಾಥಾಶ್ರಮದ 10 ನೇ ವಾರ್ಷಿಕೋತ್ಸವ

ಸಿದ್ದಾಪುರ : ತಾಲೂಕಿನ ಮುಗದುರ್ ನಲ್ಲಿರುವ ಪುನೀತ್ ರಾಜಕುಮಾರ್ ಅನಾಥಾಶ್ರಮದಲ್ಲಿ ಆಶ್ರಮದ 10 ನೇ ವಾರ್ಷಿಕೋತ್ಸವ ಹಾಗೂ ಮೇಲ್ವಿಚಾರಕಿ ಮಮತ ನಾಯ್ಕ್ ಹುಟ್ಟುಹಬ್ಬ ಕಾರ್ಯಕ್ರಮವನ್ನು ಆಚರಿಸಲಾಯಿತು
ಆಶ್ರಮದ ಮುಖ್ಯಸ್ಥ ನಾಗರಾಜ್ ನಾಯ್ಕ್ ಮಾತನಾಡಿ ದಾನಿಗಳು ಸ್ನೇಹಿತ ಸಹಕಾರದಿಂದ ಆಶ್ರಮ ನಡೆಸುತ್ತಾ ಬಂದಿದ್ದೇವೆ ಹಲವಾರು ಸಮಸ್ಯೆ ನಡುವೆಯೂ ಸೇವೆಯನ್ನು ಮುಂದುವರೆಸುತ್ತ ಬಂದಿದ್ದೇವೆ ಸೇವೆ ಒಂದು ರೀತಿಯ ಸಂತೃಪ್ತಿ ನೀಡಿದೆ ಜೊತೆಯಲ್ಲಿ ಮನೆಯವರ ಸಹಕಾರ ಕೂಡ ಸಿಕ್ಕಿದೆ ಮುಂದೆಯೂ ಸಹಕಾರ ಇದೇ ರೀತಿ ಇರಲಿ ಎಂದರು
ಕೇಕ್ ಕತ್ತರಿಸಿ, ಸಿಹಿ ಹಂಚಿ, ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು
ರೈತ ಮುಖಂಡ ವೀರಭದ್ರ ನಾಯ್ಕ್, ಲಕ್ಷಣ ನಾಯ್ಕ್ ಬೇಡ್ಕಣಿ, ಕೃಷ್ಣ ಬಳೆಗಾರ್, ಆಶ್ರಮ ಕಟ್ಟಡ ಸಮಿತಿಯ ವಿನಾಯಕ ಕೊಂಡ್ಲಿ ಮಾತನಾಡಿದರು
ಈ ಸಂದರ್ಭದಲ್ಲಿ ಉದಯ್ ನಾಯ್ಕ್, ಅನಿಲ್ ಕೊಠರಿ ಪತ್ರಕರ್ತ ದಿವಾಕರ್ ಸಂಪಖಂಡ ಮುಂತಾದವರು ಉಪಸ್ಥಿತರಿದ್ದರು